ಇದೆಂಥ ವಿಪರ್ಯಾಸ! ಹೆಗಡೆಗೆ ಪಾಠ ಕಲಿಸೋಕೆ ಪತ್ನಿಯನ್ನು ಎಳೆದುತರೋದಾ?!
ಮುಂಬೈ, ಜನವರಿ 30: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಗೆ ಪರಿಣಾಮಕಾರಿ ಪ್ರತ್ಯುತ್ತರ ನೀಡುವುದಕ್ಕೆಂದು ಹೊರಟು, ಕಾಂಗ್ರೆಸ್ ಬೆಂಬಲಿಗ ತೆಹಸೀನ್ ಪೂನಾವಾಲಾ ಎಡವಟ್ಟು ಮಾಡಿಕೊಂಡಿದ್ದಾರೆ.
"ಹಿಂದು ಯುವತಿಯರನ್ನು ಮುಟ್ಟಿದರೆ ಅಂಥವರ ಕೈ ಅಸ್ತಿತ್ವದಲ್ಲಿರಬಾರದು" ಎಂದು ಇತ್ತೀಚೆಗೆ ಅನಂತ್ ಕುಮಾರ್ ಹೆಗಡೆ ನೀಡಿದ ಹೇಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಖಡಕ್ ಪ್ರತಿಕ್ರಿಯೆ ನೀಡಲು ಹೊರಟ ಪೂನಾವಾಲಾ, ತಮ್ಮ ಪತ್ನಿಯೊಂದಿಗೆ ತಾವಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, "ನನ್ನ ಕೈ ನನ್ನ ಹಿಂದು ಜೀವದ(ಪತ್ನಿಯ) ದೇಹವನ್ನು ಮುಟ್ಟುತ್ತಿದೆ. ಧೈರ್ಯವಿದ್ದರೆ ಕೈ ಕತ್ತರಿಸಿ!" ಎಂಡು ಟ್ವೀಟ್ ಮಾಡಿದ್ದರು.
ಹೆಗಡೆ-ರಾಹುಲ್ ಟ್ವೀಟ್ ಸಮರ: ಪರಸ್ಪರ ಯೋಗ್ಯತೆಯ ಲೆಕ್ಕಾಚಾರ!
ಹೀಗೆ ಯಾವುದೋ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಕ್ಕೆಂದು ಪತ್ನಿಯ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ರಾಜಕೀಯ ದಾಳವಾಗಿ ಆಕೆಯನ್ನು ಎಳೆಯುವುದು ಸರಿಯೇ ಎಂದು ಹಲವರು ಪ್ರಶ್ನಿಸಿ, ಪೂನಾವಾಲಾ ಅವರಿಗೆ ಛೀಮಾರಿ ಹಾಕಿದ್ದಾರೆ.
|
ನಿಮ್ಮ ಪತ್ನಿಗೆ ಅವಮಾನ ಮಾಡುತ್ತಿದ್ದೀರಾ!
ನೀವು ಈ ಚಿತ್ರ ಹಾಕುವ ಮೂಲಕ ನಿಮ್ಮ ಪತ್ನಿಗೇ ಅವಮಾನ ಮಾಡುತ್ತಿದ್ದೀರಾ! ಹೆಗಡೆ ಅವರು ಹೇಳಿದ್ದು, ಯಾವುದೇ ಹಿಂದು ಹುಡುಗಿಯ ಘನತೆಗೆ ದಕ್ಕೆಯುಂಟುಮಾಡುವ ಕೈಗಳನ್ನು ಕತ್ತರಿಸಬೇಕು ಎಂದು. ಅವರು ನಿಮ್ಮ ಪತ್ನಿ. ಹೆಗಡೆ ಅವರ ಮಾತು ನಿಮ್ಮ ಪತ್ನಿಯ ವಿಶಶಯಕ್ಕೆ ಹೇಗೆ ಹೊಂದುತ್ತದೆ? ನೀವು ಅವರಿಗೆ ಅವಮಾನ ಮಾಡಿದ್ದನ್ನು ಬಿಟ್ಟರೆ ಇದರಿಂದ ಇನ್ನೇನು ಆಗಲಿಲ್ಲ - ಅವಿನಾಶ್ ಸಿಂಗ್
|
ಸಿದ್ದರಾಮಯ್ಯ ದುಪ್ಪಟ್ಟಾ ಎಳೆದಿದ್ದನ್ನು ಒಪ್ಪುತ್ತೀರಾ?
ಪ್ರಿಯತಮೆ, ಪತ್ನಿಯನ್ನು ಮುಟ್ಟಿದರೆ ಎಂದು ಹೆಗಡೆ ಅವರು ಹೇಳಲಿಲ್ಲ. ಅಕಸ್ಮಾತ್ ಅವರನ್ನು ಯಾರಾದರೂ ಅಪರಿಚಿತರು ಅಸಭ್ಯವಾಗಿ ಮುಟ್ಟಿದರೆ ನಿಮಗೆ ಕೋಪ ಬರುವುದಿಲ್ಲವೇ? ಸಿದ್ದರಾಮಯ್ಯ ಮಹಿಳೆಯೊಬ್ಬರ ದುಪ್ಪಟ್ಟ ಎಳೆದಿದ್ದನ್ನು ನೀವು ಸಮರ್ಥಿಸುತ್ತೀರಾ? ಎಂದು ಗೀತಾ ಎಸ್ ಕಪೂರ್ ಪ್ರಶ್ನಿಸಿದ್ದಾರೆ.
ಹೆಗಡೆಗೆ ಮಾತಿನ ತಪರಾಕಿ ನೀಡಿದ ದಿನೇಶ್ ಗುಂಡೂರಾವ್ ಪತ್ನಿ ಟಬು
|
ಇದು ಹೇಡಿತನವಲ್ಲವೇ?
ಯಾರಿಗೋ ಪಾಠ ಕಲಿಸಲು ಪತ್ನಿಯನ್ನು ಈ ವಿಷಯದಲ್ಲಿ ಎಳೆದು ತರೋದು ಒಬ್ಬ ಒಳ್ಳೆಯ ಪತಿಯ ಲಕ್ಷಣವಲ್ಲ. ಹೀಗೆ ಪತ್ನಿಯ ಹಿಂದೆ ಅಡಗಿ ಸವಾಲೆಸೆಯುವುದನ್ನು ಹೇಡಿತನ ಎನ್ನುತ್ತಾರೆ. ಧೈರ್ಯವಿದ್ದರೆ ಪತ್ನಿಯನ್ನು ಎಳೆದುತರದೆ, ನೀವೇ ನೇರವಾಗಿ ಬಂದು ಸವಾಲೆಸೆಯಿರಿ ಎಂದು ತುಷಾರ್ ಡೆ ಟ್ವೀಟ್ ಮಾಡಿದ್ದಾರೆ.
|
ಅವರ ಹೇಳಿಕೆಯಲ್ಲಿ ತಪ್ಪಿಲ್ಲ!
"ತಮ್ಮ ಪತ್ನಿಯನ್ನು ಮುಟ್ಟುವುದಕ್ಕೂ ಮತ್ತೊಬ್ಬರ ತಂಗಿ ಅಥವಾ ಮಗಳನ್ನು ಮುಟ್ಟುವುದಕ್ಕೂ ಬಹಳ ವ್ಯತ್ಯಾಸವಿದೆ. ಅವರ ಮಾತುಗಳಲ್ಲಿ ಯಾವ ತಪ್ಪೂ ಇಲ್ಲ. ಅದನ್ನು ಶಬ್ದಶಃ ಅರ್ಥ ಮಾಡಿಕೊಳ್ಳುವ ಬದಲು, ಆ ಹೇಳಿಕೆಯಲ್ಲಿದ್ದ ಭಾವನೆಗಳನ್ನು ಅರ್ಥಮಾಡಿಕೊಳ್ಳಿ" ಎಂದು ಮಾಹಿ ಎಂಬುವವರು ಟ್ವೀಟ್ ಮಾಡಿದ್ದಾರೆ.