ರಜನೀಕಾಂತ್ ನಟನೆಯ 'ದರ್ಬಾರ್' ಚಿತ್ರೀಕರಣ ವೇಳೆ ಕಲ್ಲೆಸೆತ
ಮುಂಬೈ, ಮೇ 2: ರಜನೀಕಾಂತ್ ಹಾಗೂ ನಯನತಾರಾ ಅಭಿನಯದ, ಎ.ಆರ್.ಮುರುಗದಾಸ್ ನಿರ್ದೇಶನದಲ್ಲಿ 'ದರ್ಬಾರ್' ಸಿನಿಮಾ ಚಿತ್ರೀಕರಣ ನಡೆಯುವ ವೇಳೆ ಕಾಲೇಜು ವಿದ್ಯಾರ್ಥಿಗಳು ಕಲ್ಲು ಎಸೆದಿದ್ದಾರೆ. ಕಾಲೇಜೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅದರ ಫೋಟೋ ತೆಗೆಯುತ್ತಿದ್ದವರಿಗೆ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರಿಗೆ ಚಿತ್ರ ತಂಡ ಆಕ್ಷೇಪಿಸಿತ್ತು.
ಇದರಿಂದ ರೊಚ್ಚಿಗೆದ್ದ ಕಾಲೇಜು ವಿದ್ಯಾರ್ಥಿಗಳು ಚಿತ್ರ ತಂಡದ ಮೇಲೆ ಕಲ್ಲೆಸೆದಿದೆ. ಈ ಘಟನೆ ನಡೆದ ಮೇಲೆ ಮುರುಗದಾಸ್ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಜತೆಗೆ ಚಿತ್ರೀಕರಣವನ್ನೇ ಬೇರೆಡೆ ನಡೆಸಲು ಚಿಂತಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದು ತಮಾಷೆಯಲ್ಲ, ರಜನಿ ಬಲಗೈ ತೋರು ಬೆರಳಿಗೆ ಶಾಯಿ!
ಇದೇ ಮೊದಲ ಬಾರಿಗೆ ರಜನೀಕಾಂತ್ ಚಿತ್ರವನ್ನು ಮುರುಗದಾಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಜನೀ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣವು ಮುಂಬೈನಲ್ಲಿ ಏಪ್ರಿಲ್ ಇಪ್ಪತ್ತೆರಡರಿಂದ ಆರಂಭವಾಗಿದೆ. ಇಪ್ಪತ್ತೈದು ವರ್ಷಕ್ಕೂ ಹಿಂದೆ ಪಾಂಡಿಯನ್ ಎಂಬ ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ಆ ನಂತರ ಈಗಲೇ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
No need of movie Poster jus a Shooting spot still is enough to gve a goosebumps #Thalaivaaaaaaa🔥🔥🔥🔥🔥 #Darbar #darbarpongal2020 pic.twitter.com/uuCqiyUexr
— Eshu Eshwar (@its_me_eshu) 23 April 2019
ದರ್ಬಾರ್ ಸಿನಿಮಾವನ್ನು ಮುಂದಿನ ವರ್ಷದ ಸಂಕ್ರಾಂತಿಗೆ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇದೆ.