ಸೋನು ಸೂದ್ ಕಾರ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಚಪ್ಪಾಳೆ
ಮುಂಬೈ, ಮೇ 30: ವಲಸೆ ಕಾರ್ಮಿಕರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ರಿಯಲ್ ಹೀರೋ ಆಗಿದ್ದಾರೆ. ಅವರ ಕೆಲಸಕ್ಕೆ ದೇಶಾದ್ಯಂತ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಮಹಾರಾಷ್ಟ್ರ ರಾಜ್ಯಪಾಲರು ಸಹ ಸೋನು ಸೂದ್ರಿಗೆ ಚಪ್ಪಾಳೆ ತಟ್ಟಿದ್ದಾರೆ.
Recommended Video
ಸೋನು ಸೂದ್ ಕೆಲಸವನ್ನು ಗಮನಿಸಿದ ಮಹಾರಾಷ್ಟ್ರ ರಾಜ್ಯಪಾಲರು, ಅವರನ್ನು ರಾಜ ಭವನಕ್ಕೆ ಆಹ್ವಾನಿಸಿದ್ದರು. ಮುಂಬೈನ ರಾಜ ಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿರನ್ನು ಇಂದು ಭೇಟಿ ಮಾಡಿದ್ದಾರೆ.
ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ಹೀರೋ ಆದ ಖಳನಾಯಕ ಸೋನು ಸೂದ್
ಈ ಬಗ್ಗೆ ಟ್ವೀಟ್ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಾಡಿದ್ದಾರೆ. ಸೋನು ಸೂದ್ ಅವರು ವಲಸೆ ಬಂದ ಜನರಿಗೆ ತಮ್ಮ ತಮ್ಮ ರಾಜ್ಯಗಳನ್ನು ತಲುಪಲು ಮತ್ತು ಅವರಿಗೆ ಆಹಾರವನ್ನು ಒದಗಿಸಲು ಸಹಾಯ ಮಾಡುತ್ತಿರುವ ಕಾರ್ಯಗಳ ಬಗ್ಗೆ ವಿವರಿಸಿದರು.
Film star @SonuSood called on at Raj Bhavan, Mumbai today. Shri Sood briefed about his ongoing work to help the migrant people to reach their home states and to provide them food. Applauded his great work and assured him of his fullest support in these endeavours. pic.twitter.com/oUMfIQGTeX
— Bhagat Singh Koshyari (@BSKoshyari) May 30, 2020
ರಾಜ್ಯಪಾಲರು ಸೋನು ಸೂದ್ ಅವರ ಮಹತ್ಕಾರ್ಯವನ್ನು ಶ್ಲಾಘಿಸಿ ಮತ್ತು ಈ ಪ್ರಯತ್ನಗಳಲ್ಲಿ ಅವರ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದರು.
ಕರ್ನಾಟಕ, ಕೇರಳ, ಒಡಿಶಾ ಹೀಗೆ ಈ ರಾಜ್ಯಗಳ ವಲಸೆ ಕಾರ್ಮಿಕರು ಬೇರೆ ಬೇರೆ ಕಡೆ ಸಿಲುಕಿಕೊಂಡಿದ್ದು, ಅವರಿಗೆ ಬಸ್ ವ್ಯವಸ್ಥೆ ಮೂಲಕ ಸೋನು ಸೂದ್ ಗೂಡು ಸೇರಿದ್ದಾರೆ. ಮಹಿಳೆಯೊಬ್ಬರು ತಮ್ಮ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.