ಉದ್ಧವ್ ಠಾಕ್ರೆ ಪಟ್ಟಾಭಿಷೇಕಕ್ಕಾಗಿ ದೆಹಲಿಯಲ್ಲಿ ಆದಿತ್ಯ ಅಲೆದಾಟ!
ಮುಂಬೈ, ನವೆಂಬರ್,27: ಮಹಾರಾಷ್ಟ್ರದಲ್ಲಿ ಸರ್ಕಾರದ ನೂತನ ಸಾರಥಿಯ ಪಟ್ಟಾಭಿಷೇಕಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಮುಂಬೈನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಪಕ್ಷದ ಮುಖ್ಯಸ್ಥರು ಮುಖ್ಯಮಂತ್ರಿ ಗದ್ದುಗೆ ಏರುತ್ತಿರುವ ಶಿವಸೇನೆ ಪಾಲಿಗಂತೂ ನಿಜವಾಗಿಯೂ ಹಬ್ಬವೇ ಆಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಶಿವಸೇನೆ-ಕಾಂಗ್ರೆಸ್-ಎನ್ ಸಿಪಿ ನಾಯಕರೆಲ್ಲ ಸೇರಿಕೊಂಡು ಉದ್ಧವ್ ಠಾಕ್ರೆ ಅವರಿಗೆ ಪಟ್ಟ ಕಟ್ಟಲು ತೀರ್ಮಾನಿಸಿದ್ದು ಆಗಿದೆ.
ಠಾಕ್ರೆ ಕುಟುಂಬದ ಮೊದಲ ಸಿ.ಎಂ ಉದ್ಧವ್ ವ್ಯಕ್ತಿಚಿತ್ರ
ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಮುಂಬೈನ ಶಿವಾಜಿ ಪಾರ್ಕ್ ಮದುವಣಗಿತ್ತಿಯಂತೆ ಸಿಂಗಾರಗೊಂಡು ನಿಂತಿದೆ. ಈಗಾಗಲೇ ಪದಗ್ರಹಣ ಕಾರ್ಯಕ್ರಮಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನ ಕಳುಹಿಸಲಾಗಿದೆ.
ಪ್ರಧಾನಮಂತ್ರಿಗೆ
ಕರೆ
ಮಾಡಿದ
ಉದ್ಧವ್
ಮಹಾರಾಷ್ಟ್ರ
ಮುಖ್ಯಮಂತ್ರಿ
ಪದಗ್ರಹಣ
ಕಾರ್ಯಕ್ರಮಕ್ಕೆ
ಆಗಮಿಸುವಂತೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಅವರಿಗೆ
ಸ್ವತಃ
ಉದ್ಧವ್
ಠಾಕ್ರೆ
ಕರೆ
ಮಾಡಿ
ಆಹ್ವಾನ
ನೀಡಿದ್ದಾರೆ
ಎನ್ನಲಾಗಿದೆ.
ಈ
ಮೊದಲು
ಆಹ್ವಾನ
ಪತ್ರಿಕೆ
ಕಳುಹಿಸಲಾಗಿದೆಯಾದರೂ,
ವೈಯಕ್ತಿಕವಾಗಿ
ಪ್ರಧಾನಿಯವರನ್ನು
ಫೋನ್
ಮೂಲಕ
ಆಗಮಿಸುವಂತೆ
ಉದ್ಧವ್
ಮನವಿ
ಮಾಡಿಕೊಂಡಿದ್ದಾರೆ.
ಈ
ವೇಳೆ
ಉದ್ಧವ್
ಠಾಕ್ರೆ
ಅವರಿಗೆ
ಪ್ರಧಾನಿ
ಮೋದಿ
ಶುಭಾಷಯ
ಕೋರಿದ್ದಾರೆ
ಎನ್ನಲಾಗಿದೆ.
ಡಿಸೆಂಬರ್.01
ಅಲ್ಲ,
ನವೆಂಬರ್.28
ಮಹಾ
ಸಿಎಂ
ಪಟ್ಟಾಭಿಷೇಕ
ಸೋನಿಯಾ
ಗಾಂಧಿ
ಅವರಿಗೆ
ಪುತ್ರನಿಂದ
ಆಹ್ವಾನ
ಒಂದೆಡೆ
ಪ್ರಧಾನಿ
ನರೇಂದ್ರ
ಮೋದಿ
ಅವರಿಗೆ
ತಂದೆ
ಕರೆ
ಮಾಡಿದ್ದರೆ,
ಇನ್ನೊಂದೆಡೆ
ತಂದೆಯ
ಪ್ರಮಾಣವಚನ
ಕಾರ್ಯಕ್ರಮಕ್ಕೆ
ಆಗಮಿಸುವಂತೆ
ಪುತ್ರ
ಆದಿತ್ಯ
ಠಾಕ್ರೆ,
ಕಾಂಗ್ರೆಸ್
ಅಧಿನಾಯಕಿ
ಸೋನಿಯಾ
ಗಾಂಧಿ
ಅವರಿಗೆ
ಆಹ್ವಾನ
ನೀಡಿದ್ದಾರೆ.