ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಯ್ಯ ಅವರನ್ನು ದೂರಲು ಬಿಜೆಪಿಗೆ ಯಾವ ನೈತಿಕತೆ ಇದೆ? ಶಿವಸೇನೆ

|
Google Oneindia Kannada News

ಮುಂಬೈ, ಜನವರಿ 16: "ಜವಹರಲಾಲ್ ನೆಹರು ವಿವಿಯ ಮಾಜಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರನ್ನು ದೂರಲು ಬಿಜೆಪಿಗೆ ಯಾವ ನೈತಿಕತೆ ಇದೆ" ಎಂದು ಶಿವಸೇನೆ ಪ್ರಶ್ನಿಸಿದೆ.

'ದೇಶವಿರೋಧಿ' ಕಾರ್ಯಕ್ರಮ; ಕನ್ಹಯ್ಯಾ ವಿರುದ್ಧ 1200 ಪುಟದ ಆರೋಪ ಪಟ್ಟಿ'ದೇಶವಿರೋಧಿ' ಕಾರ್ಯಕ್ರಮ; ಕನ್ಹಯ್ಯಾ ವಿರುದ್ಧ 1200 ಪುಟದ ಆರೋಪ ಪಟ್ಟಿ

2016 ರಲ್ಲಿ ಜೆಎನ್ ಯು ಮಾಜಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಅವರ ವಿರುದ್ಧ 'ದೇಶವಿರೋಧಿ' ಎಂದು ದೂರಿ ಆರೋಪ ಪಟ್ಟಿ ಸಿದ್ಧಪಡಿಸಿರುವುದನ್ನು ಪ್ರಶ್ನಿಸಿದ ಶಿವಸೇನೆ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮೇಲೇಕೆ ಆರೋಪ ದಾಖಲಿಸಿಲ್ಲ ಎಂದು ಅದು ಪ್ರಶ್ನಿಸಿದೆ.

ಬಿಹಾರದಲ್ಲಿ JNU ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಮೇಲೆ ದಾಳಿ ಬಿಹಾರದಲ್ಲಿ JNU ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಮೇಲೆ ದಾಳಿ

ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ನನ್ನು ಹುತಾತ್ಮ ಎಂದು ಮುಫ್ತಿ ಕರೆದಿದ್ದರು, ಭಯೋತ್ಪಾದಕರನ್ನು ಮಣ್ಣಿನ ಮಕ್ಕಳು ಎಂದಿದ್ದರು. ಆದರೆ ಅವರ ಜೊತೆಗೇ ಬಿಜೆಪಿ ಸರ್ಕಾರ ರಚಿಸಿತು. ಹಾಗಿದ್ದ ಮೇಲೆ ಕನ್ಹಯ್ಯ ಕುಮಾರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದೇಕೆ ಎಂದು ಅದು ಪ್ರಶ್ನಿಸಿದೆ.

Shiv Sena asks, What moral right does BJP have to condemn Kanhaiya Kumar?

ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯಲ್ಲಿ 2016ರ ಫೆಬ್ರವರಿಯಲ್ಲಿ ದೇಶದ್ರೋಹಿ ಕಾರ್ಯಕ್ರಮ ಆಯೋಜಿಸಿದ್ದ ಆರೋಪ ಅವರ ಮೇಲಿತ್ತು. ಮಾಜಿ ವಿದ್ಯಾರ್ಥಿ ಮುಖಂಡರಾದ ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಇತರ ಏಳು ಮಂದಿ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ವಿರುದ್ಧ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದಿರುವ ಪೊಲೀಸರು ಆರೋಪ ದಾಖಲಿಸಿದ್ದಾರೆ.

English summary
The Shiv Sena said on Wednesday that the BJP has no moral right to criticise student leader Kanhaiya Kumar, who has been charged with sedition, after teaming up with the PDP in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X