'ಶಿರಡಿ ಸಾಯಿಬಾಬಾ ದೇವರಲ್ಲ; ಅವರನ್ನು ನಂಬಬೇಡಿ'
'ಶಿರಡಿಯ ಸಾಯಿ ಬಾಬಾ ದೇವರಲ್ಲ. ಆದ್ದರಿಂದ ಅವರಿಗೆ ದೇವಸ್ಥಾನ ನಿರ್ಮಿಸುವ ಅಗತ್ಯ ಇಲ್ಲ' ಎಂದೂ ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಅಪ್ಪಣೆ ಕೊಡಿಸಿದ್ದಾರೆ.
'ವಿದೇಶೀ
ಸಂಸ್ಥೆಗಳು
ದುಡ್ಡು
ಮಾಡುವುದಕ್ಕಾಗಿ
ಇಂಥಾ
ಪಿತೂರಿ
ನಡೆಸುತ್ತವೆ.
ಹಿಂದೂಗಳು
ಒಗ್ಗಟ್ಟಾಗಿ
ಇರುವುದು
ಅವರಿಗೆ
ಇಷ್ಟವಿಲ್ಲ'
ಎಂದು
ಸ್ವರೂಪಾನಂದ
ಸ್ವಾಮಿ
ಹೇಳಿರುವುದಾಗಿ
ಟಿವಿ
ಮಾಧ್ಯಮಗಳು
ಸೋಮವಾರ
ವರದಿ
ಮಾಡಿವೆ.
(ಮೈಸೂರಿನಿಂದ
ಶಿರಡಿಗೆ
ನೇರ
ಏಕ್ಸ್
ಪ್ರೆಸ್
ರೈಲು)
'ಸನಾತನ ಧರ್ಮದಲ್ಲಿ ಭಗವಾನ್ ವಿಷ್ಣು 34 ಅವತಾರಗಳನ್ನೆತ್ತಿದ್ದಾನೆ ಎಂಬುದು ನಂಬಿಕೆ. ಕಲಿಯುಗದಲ್ಲಿ ಕಲ್ಕಿ ಮತ್ತು ಬುದ್ಧನ ನಂತರ ಯಾವುದೇ ಅವತಾರ ಇಲ್ಲ. ಹಾಗಿರುವಾಗ ಸಾಯಿಬಾಬಾ ಅವತಾರ ಪುರುಷ ಅಲ್ಲ' ಎಂಬುದು ಶಂಕರಾಚಾರ್ಯ ಸ್ವರೂಪಾನಂದ ಸ್ವಾಮಿಯ ವಾದವಾಗಿದೆ.
'ಸಾಯಿಬಾಬಾ ಅವರನ್ನು ಗುರು ಎಂದು ನಂಬಬಹುದೇ ವಿನಹ. ಆತನನ್ನು ದೇವ ಎಂದು ನಂಬಲು ಸಾಧ್ಯವಿಲ್ಲ. ಆದಾಗ್ಯೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕಾವು ಏರುವ ಹೊತ್ತಲ್ಲಿ ದೇಶದ ಚಿಂತನೆಯ ದಿಕ್ಕನ್ನು ಬದಲಿಸುವ ಸಲುವಾಗಿ ಸಾಯಿ ಬಾಬಾ ಅವರನ್ನು ದೇವಾಲಯದಲ್ಲಿ ಪೂಜಿಸಲಾಗಿತ್ತು' ಎಂದು ಶಂಕರಾಚಾರ್ಯ ಸ್ವರೂಪಾನಂದ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.