ಸಿಡುಕು ಬಿಟ್ಟು ಸರ್ಕಾರ ರಚಿಸಿ; ಮಹಾ ಸಿಎಂ ಕೊಟ್ಟೇ ಬಿಟ್ರು ರಾಜೀನಾಮೆ!
ಮುಂಬೈ,
ನವೆಂಬರ್.08:
ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ
ಪ್ರಜೆಗಳೇ
ಪ್ರಭುಗಳು
ಅಂತಾರೆ.
ಆದರೆ,
ಮಹಾರಾಷ್ಟ್ರ
ವಿಧಾನಸಭಾ
ಚುನಾವಣೆ
ಫಲಿತಾಂಶ
ಹೊರ
ಬಂದಿದ್ದೇ
ಬಂದಿದ್ದು.
ಇಲ್ಲಿ
ಪ್ರಭುಗಳು
ಯಾರು
ಅನ್ನೋದೇ
ಯಕ್ಷಪ್ರಶ್ನೆಯಾಗಿ
ಕಾಡುತ್ತಿದೆ.
ಮಹಾರಾಷ್ಟ್ರದಲ್ಲಿ
ರಾಜಕೀಯ
ಚಿತ್ರಣವನ್ನು
ನೋಡುತ್ತಿದ್ದರೆ,
ಗಂಡ
ಹೆಂಡತಿ
ಜಗಳದಲ್ಲಿ
ಕೂಸು
ಬಡವಾಯಿತು
ಎನ್ನುವ
ಗಾದೆಮಾತು
ನೆನಪಿಗೆ
ಬರುತ್ತದೆ.
ಕೇಂದ್ರದಲ್ಲಿ
ಒಗ್ಗಟ್ಟು
ಪ್ರದರ್ಶಿಸುವ
ಬಿಜೆಪಿ
ಹಾಗೂ
ಶಿವಸೇನೆ
ಪಕ್ಷಗಳು
ಮಹಾರಾಷ್ಟ್ರದಲ್ಲಿ
ಗದ್ದುಗೆ
ಹಿಡಿಯಲು
ಗುದ್ದಾಡುತ್ತಿವೆ.
ಉಭಯ
ಪಕ್ಷಗಳ
ನಡುವಿನ
ಕಿತ್ತಾಟಕ್ಕೆ
ಎನ್
ಸಿಪಿ
ಮುಖ್ಯಸ್ಥ
ಶರದ್
ಪವಾರ್
ಕಿಡಿ
ಕಾರಿದ್ದಾರೆ.
ಬಿಜೆಪಿ
ಹಾಗೂ
ಶಿವಸೇನೆ
ಪಕ್ಷಗಳು
ಒಂದಾಗಿ
ರಾಜ್ಯದಲ್ಲಿ
ಸರ್ಕಾರ
ರಚನೆ
ಮಾಡಬೇಕು
ಎಂದು
ಸಲಹೆ
ನೀಡಿದ್ದಾರೆ.
ಮಹಾರಾಷ್ಟ್ರ: ಮುಖ್ಯಮಂತ್ರಿ ಸ್ಥಾನಕ್ಕೆ ಫಡ್ನವೀಸ್ ರಾಜೀನಾಮೆ
ರಾಜ್ಯದಲ್ಲಿ ಬಿಜೆಪಿ ಹಾಗೂ ಶಿವಸೇನೆ ಪರ ಪ್ರಜೆಗಳು ತೀರ್ಪು ನೀಡಿದ್ದಾರೆ. ಉಭಯ ಪಕ್ಷದ ನಾಯಕರು ಇನ್ನು ತಡ ಮಾಡುವುದು ಉತ್ತಮವಲ್ಲ. ಎರಡು ಪಕ್ಷದ ನಾಯಕರು ಈ ನಿಟ್ಟಿನಲ್ಲಿ ಒಂದಾಗಬೇಕು. ರಾಜ್ಯದಲ್ಲಿ ಸರ್ಕಾರವನ್ನು ರಚಿಸಿ ಸುಭದ್ರ ಆಡಳಿತವನ್ನು ನೀಡಬೇಕು ಎಂದು ಶರದ್ ಪವಾರ್ ಮಾಧ್ಯಮಗಳ ಮೂಲಕ ತಿಳಿಸಿದರು.
ಸರ್ಕಾರ ರಚನೆಯಲ್ಲಿ ವಿಳಂಬ ತೋರಿದರೆ ರಾಜ್ಯದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ. ಈಗಾಗಲೆ ಭಾರಿ, ಅತಿವೃಷ್ಠಿ, ನೆರೆ ಪರಿಸ್ಥಿತಿಯಿಂದ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ಸರ್ಕಾರ ರಚಿಸುವಲ್ಲಿ ವಿಳಂಬ ಧೋರಣೆ ತೋರುವುದು ಸರಿಯಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಪಡೆದುಕೊಂಡಿದೆ. 105 ಸ್ಥಾನಗಳನ್ನು ಗೆದ್ದಿರುವ ಭಾರತೀಯ ಜನತಾ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೇಂದ್ರದಲ್ಲಿ ಒಂದಾಗಿರುವ ಬಿಜೆಪಿ-ಶಿವಸೇನೆ ಪಕ್ಷಗಳು ರಾಜ್ಯದಲ್ಲೂ ಹೊಂದಾಣಿಕೆಯಿಂದ ಸರ್ಕಾರವನ್ನು ರಚಿಸಬೇಕು ಎಂದು ಸಲಹೆ ನೀಡಿದ್ದಾರೆ.
'ಶಿವಸೇನೆಗೆ
ಎನ್
ಸಿಪಿ
ಬೆಂಬಲಿಸಿದ
ಮಾತ್ರಕ್ಕೆ
ಸರ್ಕಾರ
ರಚನೆ
ಸಾಧ್ಯವಿಲ್ಲ'
ಮಹಾರಾಷ್ಟ್ರ
ವಿಧಾನಸಭಾ
ಚುನಾವಣೆಯಲ್ಲಿ
ಪ್ರಜೆಗಳು
ತೀರ್ಪು
ಕೊಟ್ಟಾಗಿದೆ.
56
ಸ್ಥಾನಗಳನ್ನು
ಪಡೆದ
ಶಿವಸೇನೆಗೆ
ಎನ್
ಸಿಪಿ
ಬೆಂಬಲಿಸಿದ
ಮಾತ್ರಕ್ಕೆ
ಸರ್ಕಾರ
ರಚಿಸಲು
ಸಾಧ್ಯವಾಗದು.
ಎನ್
ಸಿಪಿ
ಒಂದು
ವಿರೋಧ
ಪಕ್ಷದ
ಸ್ಥಾನದಲ್ಲಿ
ಕುಳಿತುಕೊಂಡು
ಕೆಲಸ
ಮಾಡಲು
ಇಚ್ಛಿಸುತ್ತದೆ.
ಶಿವಸೇನೆಗೆ
ಬೆಂಬಲಿಸಿ
ಸರ್ಕಾರ
ರಚನೆಗೆ
ಮುಂದಾಗುವ
ಮಾತೇ
ಇಲ್ಲ
ಎಂದು
ಶರದ್
ಪವಾರ್
ತಿಳಿಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮೊದಲೇ ಬಿಜೆಪಿ-ಶಿವಸೇನೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಮೊದಲೇ ಊಹಿಸಿದಂತೆ ಉಭಯ ಪಕ್ಷಗಳಿಗೆ ಮತದಾರರು ಬಹುಮತ ನೀಡಿದ್ದಾರೆ. ಆದರೆ, ಪ್ರಜೆಗಳ ತೀರ್ಪನ್ನು ಪ್ರತಿನಿಧಿಗಳು ಇಲ್ಲಿ ಒಪ್ಪಿಕೊಳ್ಳುತ್ತಿಲ್ಲ. ಎರಡು ಪಕ್ಷಗಳ ನಡುವಿನ ಅಧಿಕಾರದ ಹಗ್ಗಜಗ್ಗಾಟ ತಾರಕಕ್ಕೆ ಹೋಗಿದೆ. ಶಿವಸೇನೆಯ ಹಠಕ್ಕೆ ಬಿಜೆಪಿ ರೋಸಿ ಹೋಗಿದೆ. ಈಗಾಗಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.