ಆರ್ಟಿಕಲ್ 370 ರದ್ದಾದರೂ ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲ, ಹೊಣೆ ಯಾರು?: ಸಂಜಯ್ ರಾವುತ್
ಮುಂಬೈ, ಮೇ 13: ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಭಯೋತ್ಪಾದಕರು ಕಂದಾಯ ನೌಕರನಾಗಿದ್ದ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಮತ್ತು ರಿಯಾಜ್ ಅಹ್ಮದ್ ಎಸ್ಎಚ್ಒ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ರಾಹುಲ್ ಭಟ್ ಹತ್ಯೆಗೆ ಕಾಶ್ಮೀರಿ ಪಂಡಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ
ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂತರ ಹಿಂಸಾಚಾರದ ಕುರಿತು ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಶಿವಸೇನೆ ಪ್ರಶ್ನೆಗಳನ್ನು ಎತ್ತಿದ್ದು, ಗುರುವಾರ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆಯ ನಂತರ, ಶಿವಸೇನೆ ವಕ್ತಾರ ಸಂಜಯ್ ರಾವತ್ ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರವೂ ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿಲ್ಲದಿದ್ದರೆ ಅದು ಯಾರ ಜವಾಬ್ದಾರಿ ಎಂದು ಅವರು ಪ್ರಶ್ನೆ ಮಾಡಿದರು.
ಕಾಶ್ಮೀರಿ ಪಂಡಿತರು ಮನೆಗೆ ಮರಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಶಿವಸೇನೆ ವಕ್ತಾರರಾಗಿರುವ ಸಂಜಯ್ ರಾವತ್ ತಿಳಿಸಿದ್ದು, 7 ವರ್ಷಗಳಿಂದ ಎಷ್ಟು ಮಂದಿ ಮನೆಗೆ ಮರಳಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಅಲ್ಲಿ ವಾಸಿಸುವವರಿಗೂ ಉಳಿಯಲು ಬಿಡುತ್ತಿಲ್ಲ, ಅವರನ್ನೂ ಕೊಲೆ ಮಾಡಲಾಗುತ್ತಿದೆ. ಗೃಹ ಸಚಿವರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಇಬ್ಬರು ಸಾವನ್ನಪ್ಪಿದ್ದಾರೆ ಅದರಲ್ಲಿ ಕಂದಾಯ ಇಲಾಖೆಯಲ್ಲಿ ನೇಮಕಗೊಂಡಿರುವ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತನೂ ಸೇರಿದ್ದನು ಎಂದು ಹೇಳಿದರು.
ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಾಹುಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ ಭಯೋತ್ಪಾದಕರು ಮೊದಲು ಅವನ ಹೆಸರನ್ನು ಕೇಳಿದರು ಮತ್ತು ನಂತರ ಅವನನ್ನು ಹೊಡೆದರು. ರಾಹುಲ್ ಹತ್ಯೆಯ ನಂತರ ಕಾಶ್ಮೀರಿ ಪಂಡಿತರ ಕೋಪ ಏಳನೇ ಆಕಾಶದಲ್ಲಿ ಕಾಣಿಸಿಕೊಂಡಿತು. ಕಾಶ್ಮೀರಿ ಪಂಡಿತರು ಗುರುವಾರ ರಾತ್ರಿಯಿಡೀ ಪ್ರತಿಭಟನೆ ನಡೆಸಿದರು, ನಂತರ ಶುಕ್ರವಾರವೂ ಜನರು ಹೆದ್ದಾರಿಯನ್ನು ತಡೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ರಾಹುಲ್ ಹತ್ಯೆಯಾದ 12 ಗಂಟೆಗಳಲ್ಲಿ ಉಗ್ರರು ಒಬ್ಬ ಎಸ್ಎಚ್ಒನನ್ನು ಗುಂಡಿಕ್ಕಿ ಕೊಂದರು. ಇಂದು ಬೆಳಗ್ಗೆ ಎಸ್ಪಿಒ ರಿಯಾಜ್ ಅಹ್ಮದ್ ಅವರ ಮನೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಿಯಾಜ್ ಅಹ್ಮದ್ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಈ ಎರಡೂ ಘಟನೆಗಳಿಂದಾಗಿ ಕಾಶ್ಮೀರದ ಜನರಲ್ಲಿ ಸರ್ಕಾರ ಮತ್ತು ಆಡಳಿತದ ವಿರುದ್ಧ ಆಕ್ರೋಶವಿದೆ. ಕಾಶ್ಮೀರ ನೀತಿಗಳ ಬಗ್ಗೆ ಶಿವಸೇನೆ ಸರ್ಕಾರ ವಿರುದ್ಧ ಪ್ರಶ್ನೆಗಳನ್ನು ಎತ್ತಿದೆ ಎಂದರು.