ಸಲ್ಮಾನ್ ಹಣ, ಆಹಾರ ವಿತರಣೆ ಸುದ್ದಿ: ಮುಂಬೈನಲ್ಲಿ ಮುಗಿಬಿದ್ದ ಜನ
ಮುಂಬೈ, ಮೇ 22: ಬಾಲಿವುಡ್ ನಟ ಸಲ್ಮಾನ್ ಖಾನ್ ಉಚಿತವಾಗಿ ಆಹಾರ ಹಾಗೂ ಹಣವನ್ನು ನೀಡುತ್ತಾರೆ ಎಂಬ ಸುಳ್ಳು ವದಂತಿಯನ್ನು ನಂಬಿ ನೂರಾರು ಸಂಖ್ಯೆಯ ಜನರು ಬುಧವಾರ ಸಂಜೆ ಮುಂಬೈನ ಭಿವಾಂಡಿಯಲ್ಲಿ ಸೇರಿದ್ದರು.
Recommended Video
ರಂಜಾನ್ ಮನೆಯಲ್ಲೇ ಆಚರಣೆ ಮಾಡಿ: ಸಚಿವ ಪ್ರಭು ಚವ್ಹಾಣ್
ಬುಧವಾರ ಸಂಜೆ ಭಿವಾಂಡಿಯ ಖಂಡಪುಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಂಜಾನ್ ವಿಶೇಷವಾಗಿ, ಹಬ್ಬಕ್ಕೂ ಮುಂಚೆ ಸಲ್ಮಾನ್ ಖಾನ್ ಹಣ ಮತ್ತು ಆಹಾರವನ್ನು ವಿತರಿಸಲಿದ್ದಾರೆ ಎನ್ನುವ ಸುದ್ದಿವೊಂದು ಹರಿದಾಡಿತ್ತು. ಹೀಗಾಗಿ, ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
Maharashtra: Thousands of people gathered on the street due to the news of actor Salman Khan's arrival in Bhiwandi since last evening. After that Police reached the spot and sent all the people home. pic.twitter.com/3SYiBtLXbm
— Nikhil Choudhary (@NikhilCh_) May 21, 2020
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಜನರ ಗುಂಪಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚಿದ್ದರು. ಕೊರೊನಾ ದೊಡ್ಡ ಮಟ್ಟಕ್ಕೆ ಏರಿಕೆ ಕಂಡರೂ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದನ್ನು ಮರೆತ್ತಿದ್ದರು. ಕೊರೊನಾ ವೈರಸ್ ತಡೆಗಟ್ಟಲು ಇರುವ ನಿಯಮಗಳನ್ನು ಪಾಲನೆ ಮಾಡಲಿಲ್ಲ.
ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಜನರ ಗುಂಪನ್ನು ಚದುರಿಸಿದ್ದಾರೆ. ಇದೊಂದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಪತ್ರಕರ್ತರೊಬ್ಬರು ಅಲ್ಲಿನ ವಿಡಿಯೋ ಮಾಡಿದ್ದು, ಆ ವೇಳೆ ಮಹಿಳೆಯೊಬ್ಬರು ಸಲ್ಮಾನ್ ಹಣ, ಆಹಾರ ನೀಡುತ್ತಾರೆ ಎಂದರು ಅದಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.