'ಮೋದಿ ಮುಕ್ತ ಭಾರತ'ಕ್ಕೆ ಕರೆನೀಡಿದ ರಾಜ್ ಠಾಕ್ರೆ
Recommended Video
ಮುಂಬೈ, ಮಾರ್ಚ್ 19: "ಇಂದು ನಾವು ಮೂರನೆಯ ಬಾರಿ ಸ್ವಾತಂತ್ರ್ಯಕ್ಕೆ ಹೋರಾಡಬೇಕಿದೆ. ಮೋದಿ ಮುಕ್ತ ಭಾರತವನ್ನು ವಾಸ್ತವದಲ್ಲಿ ತರಲು ಎಲ್ಲ ಪಕ್ಷಗಳೂ ಒಂದಾಗಬೇಕಿದೆ" ಎಂದು ಮಹಾರಾಷ್ಟ್ರ ನವನಿರ್ಮಾಣ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಲ್ಲಿನ ಶಿವಾಜಿ ಪಾರ್ಕ್ ನಲ್ಲಿ ಯುಗಾದಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, 'ಮೋದಿ ಮುಕ್ತ ಭಾರತ'ಕ್ಕೆ ಕರೆನೀಡಿದರು.
2019ರಲ್ಲಿ ಬಿಜೆಪಿಗೆ 100-110 ಸ್ಥಾನ ಖೋತಾ: ಶಿವಸೇನೆ ಭವಿಷ್ಯ
ಸುಮಾರು ಒಂದು ಗಂಟೆಯಷ್ಟು ದೀರ್ಘಕಾಲ ಮಾತನಾಡಿದ ಅವರು, ನಮಗಿಂದು ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದರು. ಇದಕ್ಕಾಗಿ ದೇಶದ ಭವಿಷ್ಯದಲ್ಲಿ ಹಲವು ದಂಗೆಗಳು ಸಂಭವಿಸಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.
ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಹಲವು ಪಕ್ಷಗಳಲು ಒಂದಾಗಿ, ಮೋದಿಯವರನ್ನು ಸೋಲಿಸಲು ಪಣತೊಟ್ಟಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ವಿಪಕ್ಷಗಳ ಆತ್ಮವಿಶಾಸವನ್ನು ಹೆಚ್ಚಿಸಿದೆ.