ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HDFC ಸಿಬ್ಬಂದಿ ನಿಗೂಢ ಹತ್ಯೆ: ವೃತ್ತಿ ಮಾತ್ಸರ್ಯವೇ ಕಾರಣ!

|
Google Oneindia Kannada News

ಮುಂಬೈ, ಸೆಪ್ಟೆಂಬರ್ 10: ಮುಂಬೈಯಲ್ಲಿ ಸೆ.5 ರಿಂದ ನಾಪತ್ತೆಯಾಗಿದ್ದ ಎಚ್ ಡಿಎಫ್ ಸಿ ಬ್ಯಾಕೊಂದರ ಉಪಾಧ್ಯಕ್ಷ ಸಿದ್ಧಾರ್ಥ್ ಸಂಘ್ವಿ(39) ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.

ಸಂಘ್ವಿ ಸಾವಿಗೆ ವೃತ್ತಿ ಮಾತ್ಸರ್ಯವೇ ಕಾರಣ ಎಂಬ ಆಘಾತಕಾರಿ ಅಂಶವೂ ಬಂಧಿತ ಆರೋಪಿ ಸರ್ಫರಾಜ್ ಶೇಖ್ ನಿಂದ ತಿಳಿದುಬಂದಿದೆ.

ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ?ಗಂಗಾಧರ ಚಡಚಣ ನಿಗೂಢ ಹತ್ಯೆ : ಚಾರ್ಜ್ ಶೀಟ್‌ನಲ್ಲೇನಿದೆ?

ಸೆ.5 ರಂದು ಬ್ಯಾಂಕಿನಿಂದ ಸಂಜೆ 7:30 ರ ಸುಮಾರಿಗೆ ಮನೆಗೆ ಹೊರಟಿದ್ದ ಸಂಘ್ವಿ ಅವರನ್ನು ಅಪಹರಿಸಲಾಗಿತ್ತು. ಎಷ್ಟು ಹೊತ್ತಾದರೂ ಪತಿ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪತ್ನಿ ಸಂಘ್ವಿಗೆ ಫೋನ್ ಮಾಡಿದರೆ ಸ್ವಿಚ್ಡ್ ಆಫ್ ಬಂದಿದೆ. ನಂತರ ಸಂಘ್ವಿ ಅವರ ಸ್ನೇಹಿರಿಗೆಲ್ಲ ಫೋನ್ ಮಾಡಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಆತಕಗೊಂದ ಕುಟುಂಬಸ್ಥರು ಮರುದಿನ ನಸುಕಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

Professional gealous kills HDFC bank VP in Mumbai: Body found

20 ವರ್ಷ ವಯಸ್ಸಿನ ಸರ್ಫರಾಜ್ ಶೇಖ್ ಎಂಬಾತ ಸಿದ್ಧಾರ್ಥ್ ಅವರ ಮಾರುತು ಸುಜುಕಿ ಇಗ್ನಿಸ್ ಕಾರಿನ ಬಳಿ ಓಡಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಂಘ್ವಿ ಅವರನ್ನು ಕೊಲ್ಲಲು ತಮಗೆ ಮೂವರು ಮಹಿಳೆಯರು ಸುಫಾರಿ ಕೊಟ್ಟಿದ್ದರು ಎಂದು ಶೇಖ್ ಬಾಯಿ ಬಿಟ್ಟಿದ್ದಾನೆ. ಆದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಸಂಘ್ವಿ ಅವರ ಸಹೋದ್ಯೋಗಿಗಳೇ ಅವರ ಹತ್ಯೆಗೆ ಸುಫಾರಿ ನೀಡಿದ್ದರು ಎಂಬುದು ತಿಳಿದುಬಂದಿದೆ.

ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಿಬಿಐ ವಶಕ್ಕೆಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಿಬಿಐ ವಶಕ್ಕೆ

ವೃತ್ತಿ ಮಾತ್ಸರ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದ್ದು, ಇತ್ತೀಚೆಗಷ್ಟೇ ಸಂಘ್ವಿ ಅವರು ಪ್ರಮೋಶನ್ ಪಡೆದಿದ್ದರು. ಇದನ್ನು ಸಹಿಸದ ಅವರ ಸಹೋದ್ಯೋಗಿಗಳೇ ಆತನ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ.

ರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷರಿಯಾನ್ ಶಾಲೆಯ ಪ್ರದ್ಯುಮ್ನ ಠಾಕೂರ್ ಕೊಲೆಗೆ ಒಂದು ವರ್ಷ

ಮುಂಬೈಯ ಕಮಲ್ ಮಿಲ್ಸ್ ಬಳಿಯಿರುವ ಎಚ್ ಡಿಎಫ್ ಸಿ ಬ್ಯಾಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಘ್ವಿ ಅವರ ಮೃತದೇಹ ಅವರದೇ ಕಾರಿನಲ್ಲಿ ಭಾನುವಾರ ಪತ್ತೆಯಾಗಿತ್ತು.

English summary
The body of the HDFC Bank's vice president Siddharth Sanghvi, who went missing on September 5, has been found, police said on Monday. The cops are probing the murder angle and have apprehended one Sarfaraz Shaikh. They are further investigating the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X