ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ: ರಾಹುಲ್ ಗೆ ಪ್ರಿಯಾ ಪತ್ರ
ಮುಂಬೈ, ಜನವರಿ 07: ಮುಂಬೈ ಕಾಂಗ್ರೆಸ್ ಘಟಕದೊಂದಿಗೆ ಮುನಿಸಿಕೊಂಡಿರುವ ಮಾಜಿ ಸಂಸದೆ ಪ್ರಿಯಾ ದತ್ ಈ ಬಾರಿ ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾ
ನಟ, ರಾಜಕಾರಣಿ ಸುನಿಲ್ ದತ್ ಅವರ ಪುತ್ರಿ ಪ್ರಿಯಾ ದತ್, 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಮತ್ತು ನಂತರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲುಗಳನ್ನು ಟೀಕಿಸಿದ್ದರು.
ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಂಡವನ್ನು ಸದಾ ಟೀಕಿಸುತ್ತಿದ್ದ ಪ್ರಿಯಾ ದತ್ ಅವರನ್ನು ಕಾಮಗ್ರೆಸಿನ ಎಲ್ಲಾ ಜವಾಬ್ದಾರಿಯಿಂದ ಸೆಪ್ಟೆಂಬರ್ 2018 ರಲ್ಲೇ ಬಿಡುಗಡೆಗೊಳಿಸಲಾಗಿತ್ತು. ಇದೀಗ ರಾಹುಲ್ ಗಾಂಧಿ ಅವರಿಗೆ ಸ್ವತಂ ಪತ್ರ ಬರೆದಿರುವ ಪ್ರಿಯಾ ದತ್, 'ನನಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ' ಎಂದು ತಿಳಿಸಿದ್ದಾರೆ.
ಫೈರ್ ಬ್ರಾಂಡ್ ಮುಖಂಡ ಸದ್ಯದಲ್ಲೇ ಪಕ್ಷಕ್ಕೆ ಗುಡ್ ಬೈ: ಬಿಜೆಪಿಗೆ ಕಾದಿದೆ ಬಿಗ್ ಶಾಕ್?
ಅವರು ಕಾಂಗ್ರೆಸ್ ತೊರೆದು ಬೇರೆ ಪಕ್ಷದತ್ತ ವಾಲಲಿದ್ದಾರಾ? ಅಥವಾ ರಾಜಕೀಯದಿಂದ ದೂರವುಳಿಯಲಿದ್ದಾರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.