ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
ಮುಂಬೈ,
ಡಿಸೆಂಬರ್.15:
ಕೇಂದ್ರ
ಸರ್ಕಾರ
ಜಾರಿಗೊಳಿಸಿದ
ಪೌರತ್ವ
ಕಾಯ್ದೆ
ಬಗ್ಗೆ
ಈಗಲೇ
ಏನನ್ನೂ
ಹೇಳುವುದಿಲ್ಲ
ಎಂದು
ಮಹಾರಾಷ್ಟ್ರ
ಮುಖ್ಯಮಂತ್ರಿ
ಉದ್ಧವ್
ಠಾಕ್ರೆ
ಸ್ಪಷ್ಟಪಡಿಸಿದ್ದಾರೆ.
ವಿನಾಕಾರಣ
ಪೌರತ್ವ
ಕಾಯ್ದೆ
ವಿಚಾರಕ್ಕೆ
ರಾಜಕೀಯ
ಬಣ್ಣ
ಬಳೆಯಲಾಗುತ್ತಿದೆ.
ಸುಪ್ರೀಂಕೋರ್ಟ್
ನಲ್ಲಿ
ಪೌರತ್ವ
ಕಾಯ್ದೆ
ಕುರಿತು
ಹಲವು
ಮೇಲ್ಮನವಿಗಳು
ಸಲ್ಲಿಕೆಯಾಗಿವೆ.
ದೇಶದ
ಸರ್ವೋಚ್ಛ
ನ್ಯಾಯಾಲಯದ
ತೀರ್ಪನ್ನು
ನೋಡಿಕೊಂಡು
ಶಿವಸೇನೆ
ತನ್ನ
ನಿಲುವನ್ನು
ಸ್ಪಷ್ಟಪಡಿಸಲಿದೆ
ಎಂದು
ಪಕ್ಷದ
ಅಧ್ಯಕ್ಷರೂ
ಆಗಿರುವ
ಉದ್ಧವ್
ಠಾಕ್ರೆ
ಹೇಳಿದ್ದಾರೆ.
'ರಾಹುಲ್'
ಸಾವರ್ಕರ್
ಅಲ್ಲ
ಎಂದಿದ್ದಕ್ಕೆ
ಮಾನನಷ್ಟ
ಮೊಕದ್ದಮೆ!
ಇನ್ನು,
ದೇಶಭಕ್ತ
ವೀರ
ಸಾವರ್ಕರ್
ಬಗೆಗೆ
ಶಿವಸೇನೆಯ
ಸಿದ್ದಾಂತ
ಎಂದೆಂದಿಗೂ
ಬದಲಾಗುವುದಿಲ್ಲ.
ಈ
ಮೊದಲು
ಪಕ್ಷದ
ನಿಲುವು
ಏನಿತ್ತೋ,
ಈಗಲೂ
ಅದೇ
ನಿಲುವನ್ನು
ಹೊಂದಿದೆ.
ಸುಖಾಸುಮ್ಮನೆ
ಈ
ಕುರಿತು
ಯಾವುದೇ
ಗೊಂದಲಗಳನ್ನು
ಸೃಷ್ಟಿಸಬಾರದು
ಎಂದು
ಸಿಎಂ
ಉದ್ದವ್
ಠಾಕ್ರೆ
ತಿಳಿಸಿದ್ದಾರೆ.
"ಶಿವಸೇನೆ
ಸಿದ್ದಾಂತವೇ
ಬೇರೆ,
ಸರ್ಕಾರವೇ
ಬೇರೆ"
ನಾಗ್ಪುರದಲ್ಲಿ
ಮಾತನಾಡಿರುವ
ಮುಖ್ಯಮಂತ್ರಿ
ಉದ್ಧವ್
ಠಾಕ್ರೆ,
ಮಹಾರಾಷ್ಟ್ರದಲ್ಲಿ
ಅಧಿಕಾರ
ನಡೆಸುತ್ತಿರುವ
ಮಹಾ
ವಿಕಾಸ್
ಅಗಾದಿ
ಸರ್ಕಾರವು
ಸಾಮಾನ್ಯ
ಯೋಜನಾ
ಕಾರ್ಯಕ್ರಮಗಳ
ಮೇಲೆ
ನಡೆಯುತ್ತಿದೆ.
ಶಿವಸೇನೆ,
ಕಾಂಗ್ರೆಸ್
ಹಾಗೂ
ರಾಷ್ಟ್ರೀಯ
ಕಾಂಗ್ರೆಸ್
ಪಕ್ಷದ
ಸಿದ್ದಾಂತ
ಮೇಲಲ್ಲ
ಎಂದು
ಅವರು
ಸ್ಪಷ್ಟಪಡಿಸಿದ್ದಾರೆ.
ಶಿವಸೇನಾ
ಪಕ್ಷದ
ಸಿದ್ದಾಂತವೇ
ಬೇರೆ,
ಮೈತ್ರಿ
ಸರ್ಕಾರದ
ಯೋಜನೆ
ಮತ್ತು
ಕಾರ್ಯಕ್ರಮಗಳೇ
ಬೇರೆ.
ಇದಕ್ಕೆ
ವಿನಾಕಾರಣ
ರಾಜಕೀಯದ
ಬಣ್ಣ
ಬಳೆಯುವ
ಅಗತ್ಯವಿಲ್ಲ
ಎಂದು
ಬಿಜೆಪಿ
ವಿರುದ್ಧ
ಕಿಡಿ
ಕಾರಿದ್ದಾರೆ.