ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಸಿಪಿ ಪಟ್ಟಿ ಮಾಡಿದ ಮೋದಿ ಸರ್ಕಾರದ 8 ನ್ಯೂನ್ಯತೆಗಳು

|
Google Oneindia Kannada News

ಮುಂಬೈ, ಮೇ 27: ಎನ್‌ಸಿಪಿ ಪಕ್ಷವು ನರೇಂದ್ರ ಮೋದಿ ಸರ್ಕಾರದ ಕಳೆದ ಎಂಟು ವರ್ಷಗಳ ವೈಫಲ್ಯಗಳನ್ನುಗುರುತಿಸಿ ಪಟ್ಟಿ ಮಾಡಿದೆ.

ಏರುತ್ತಿರುವ ಹಣದುಬ್ಬರ, ಹೆಚ್ಚಿನ ನಿರುದ್ಯೋಗ ಮತ್ತು ಅನಿಯಂತ್ರಿತ ದ್ವೇಷದ ರಾಜಕೀಯವನ್ನು ಅವುಗಳಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ ಎಂದು ಹೇಳಿದೆ. ಮೇ 26 ರಂದು ಎಂಟು ವರ್ಷಗಳನ್ನು ಪೂರೈಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ದೇಶವು ಸಾಕಷ್ಟು ಕಳೆದುಕೊಂಡಿದೆ ಎಂದು ಮಹಾರಾಷ್ಟ್ರ ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ ಹೇಳಿದ್ದಾರೆ.

 ಗೋಬ್ಯಾಕ್ ಮೋದಿ ಎಂದ ಟ್ವಿಟ್ಟಿಗರು: ಭಾರೀ ಸ್ವಾಗತದಲ್ಲಿ ಮಿಂದೆದ್ದ ಪ್ರಧಾನಿ ಗೋಬ್ಯಾಕ್ ಮೋದಿ ಎಂದ ಟ್ವಿಟ್ಟಿಗರು: ಭಾರೀ ಸ್ವಾಗತದಲ್ಲಿ ಮಿಂದೆದ್ದ ಪ್ರಧಾನಿ

ಏರುತ್ತಿರುವ ಹಣದುಬ್ಬರ, ಅಧಿಕ ನಿರುದ್ಯೋಗ, ಪ್ರಜಾಪ್ರಭುತ್ವದ ನಿಗ್ರಹ, ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ವಿಫಲತೆ, ದ್ವೇಷದ ರಾಜಕೀಯ, ರೂಪಾಯಿ ಮೌಲ್ಯದ ಐತಿಹಾಸಿಕ ಕುಸಿತ, ಆರ್ಥಿಕ ಕುಸಿತ ಮತ್ತು ಸಾಮಾಜಿಕ ರಚನೆಯ ಸವೆತವನ್ನು ಪ್ರಧಾನ ಮಂತ್ರಿ ಮೋದಿ ಸರ್ಕಾರದ 8 ವೈಫಲ್ಯಗಳು ಎಂದು ಪಟ್ಟಿ ಮಾಡಿದ್ದಾರೆ.

ಜಗತ್ತಿನ ಕಲ್ಯಾಣಕ್ಕೋಸ್ಕರ ಭಾರತ ಶ್ರಮಿಸುತ್ತಿದೆ ಎಂದ ಪ್ರಧಾನಿ ಮೋದಿಜಗತ್ತಿನ ಕಲ್ಯಾಣಕ್ಕೋಸ್ಕರ ಭಾರತ ಶ್ರಮಿಸುತ್ತಿದೆ ಎಂದ ಪ್ರಧಾನಿ ಮೋದಿ

"ಈ ಎಂಟು ವರ್ಷಗಳ ಮೋದಿ ದುರಾಡಳಿತದಲ್ಲಿ ದೇಶ ಬಹಳಷ್ಟು ಕಳೆದುಕೊಂಡಿದೆ. ಆರ್‌ಎಸ್‌ಎಸ್ ಸಿದ್ಧಾಂತವು ದೇಶದ ಕೋಮು ಸೌಹಾರ್ದತೆಯನ್ನು ಹಾಳು ಮಾಡಿದೆ. ಧರ್ಮ ಮತ್ತು ಜನಾಂಗೀಯತೆಯು ವಿಜ್ಞಾನ ಮತ್ತು ಸಮಾನತೆಯ ಮೇಲೆ ಆಳ್ವಿಕೆ ನಡೆಸುತ್ತಿದೆ" ಎಂದು ತಾಪಸೆ ಆರೋಪಿಸಿದ್ದಾರೆ.

 ಬಿಜೆಪಿ ಸೇಡಿನ ರಾಜಕೀಯದಲ್ಲಿ ತೊಡಗಿದೆ

ಬಿಜೆಪಿ ಸೇಡಿನ ರಾಜಕೀಯದಲ್ಲಿ ತೊಡಗಿದೆ

ಈ ಹಿಂದೆಯು ಶಿವಸೇನಾ ನಾಯಕ ಸಂಜಯ್ ರಾವತ್‌ಗೆ ಸಂಬಂಧಿಸಿದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡ ನಂತರ ಮಹಾರಾಷ್ಟ್ರದ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರ ಧ್ವನಿಯನ್ನು ಅಡಗಿಸಲು ಬಿಜೆಪಿ ಸೇಡಿನ ರಾಜಕೀಯದಲ್ಲಿ ತೊಡಗಿದೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎನ್‌ಸಿಪಿ ಆರೋಪಿಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ರಾವತ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿರುವ ಅಲಿಬಾಗ್‌ನಲ್ಲಿರುವ ಎಂಟು ಜಮೀನುಗಳನ್ನು ಮತ್ತು ಮುಂಬೈನ ದಾದರ್ ಉಪನಗರದಲ್ಲಿರುವ ಫ್ಲ್ಯಾಟ್‌ಗಳನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

 ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ಪ್ರಶ್ನೆ

ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ಪ್ರಶ್ನೆ

2019ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ ಮಹಾರಾಷ್ಟ್ರ ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ ಮಹಾ ವಿಕಾಸ್ ಅಘಾಡಿ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ತಪಸ್ ಜಾರಿ ನಿರ್ದೇಶನಾಲಯದ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು, ತನಿಖಾ ಸಂಸ್ಥೆಯ ಕೆಲವು ಅಧಿಕಾರಿಗಳ ವಿರುದ್ಧ ರಾವತ್ ಸುಲಿಗೆ ಆರೋಪವನ್ನು ತನಿಖೆ ಮಾಡಲು ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ ತಕ್ಷಣ ಕ್ರಮಕ್ಕೆ ಕೈಗೊಂಡಿತ್ತು.

 ರಾಜಕೀಯ ವಿರೋಧಿಗಳ ಧ್ವನಿಯನ್ನು ಮರೆಮಾಚಲು

ರಾಜಕೀಯ ವಿರೋಧಿಗಳ ಧ್ವನಿಯನ್ನು ಮರೆಮಾಚಲು

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ 2019 ರ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ರಚಿಸಿದ್ದವು, ಶಿವಸೇನೆಯು ದೀರ್ಘಕಾಲದ ಮಿತ್ರ ಬಿಜೆಪಿಯಿಂದ ಆಗ ಬೇರ್ಪಟ್ಟಿತು. ಕೇಂದ್ರದ ಬಿಜೆಪಿ ಸರ್ಕಾರವು ತನ್ನ ರಾಜಕೀಯ ವಿರೋಧಿಗಳ ಧ್ವನಿಯನ್ನು ಮರೆಮಾಚಲು ತನ್ನ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸೇಡಿನ ರಾಜಕಾರಣ ಎಂದು ತಾಪಸೆ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.

 ಕೆಲವರು ಜೈಲಿಗೆ ಹೋಗುತ್ತಾರೆ

ಕೆಲವರು ಜೈಲಿಗೆ ಹೋಗುತ್ತಾರೆ

ಮಹಾರಾಷ್ಟ್ರದ ಆಡಳಿತಾರೂಢ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಪರವಾಗಿ ಮತ್ತು ಬಿಜೆಪಿ ವಿರುದ್ಧ ಶಿವಸೇನೆ ನಾಯಕ ಮಾತನಾಡಿದ್ದರಿಂದ ರಾವುತ್‌ಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದರು. ಕೆಲವು ಇಡಿ ಅಧಿಕಾರಿಗಳು ಬಿಜೆಪಿಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾವತ್ ಕಳೆದ ತಿಂಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಮುಂಬೈ ಪೊಲೀಸರು ಕೇಂದ್ರೀಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ವಿರುದ್ಧ ಸುಲಿಗೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರು ಜೈಲಿಗೆ ಹೋಗುತ್ತಾರೆ ಎಂದು ಅವರು ಹೇಳಿದ್ದರು. ಆರೋಪ ಮಾಡುವಾಗ ಶಿವಸೇನೆ ಸಂಸದರು ಯಾವುದೇ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಮಹಾರಾಷ್ಟ್ರದ ಗೃಹ ಸಚಿವರು ರಾವತ್ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆಗೆ ಆದೇಶಿಸಿದ ತಕ್ಷಣ, ಇಡಿ ಅವರ ಆಸ್ತಿ ಮತ್ತು ನಿವಾಸವನ್ನು ಜಪ್ತಿ ಮಾಡಿದೆ, ಬಿಜೆಪಿಯು ಇಂತಹ ನಡೆಗಳ ಮೂಲಕ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವರ್ಚಸ್ಸು ಕುಗ್ಗಿಸಲು ಬಯಸುತ್ತದೆ ಎಂದು ತಾಪಸ್ ಹೇಳಿದ್ದರು.

Recommended Video

Narendra Modi ತಮಿಳು ನಾಡಿಗೆ ಹೋದಾಗ ಆಶ್ಚರ್ಯ ಕಾದಿತ್ತು | OneIndia Kannada

English summary
The Nationalist Congress Party (NCP) lists the failures of the Prime Minister Narendra Modi lead government over the past eight years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X