ಎನ್ಸಿಪಿ ಮುಖಂಡ ದಿಲೀಪ್ ''ಮಹಾ'' ಹಂಗಾಮಿ ಸ್ಪೀಕರ್
ಮುಂಬೈ, ನವೆಂಬರ್ 29: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಶಾಸಕ, ಹಿರಿಯ ಮುಖಂಡ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಶುಕ್ರವಾರದಂದು ನೇಮಿಸಲಾಗಿದೆ.
1956ರ ಅಕ್ಟೋಬರ್ 30ರಂದು ಜನಿಸಿದ ದಿಲೀಪ್ ವಲ್ಸೆ ಪಾಟೀಲ್ ಅವರು ಮಹಾರಾಷ್ಟ್ರದ ಅಂಬೆಗಾಂವ್ ಮೂಲದವರು, 6 ಬಾರಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರಾಗಿ ಅನುಭವ ಹೊಂದಿದ್ದಾರೆ. 2019ರಲ್ಲಿ ಗೆಲುವು ಸಾಧಿಸಿ 7ನೇ ಬಾರಿಗೆ ಅಸೆಂಬ್ಲಿ ಪ್ರವೇಶಿಸಲಿದ್ದಾರೆ.
ಶಾಸಕರಾಗದೇ ಸಿಎಂ ಪಟ್ಟಕ್ಕೇರಿದವರ ಪೈಕಿ ಉದ್ಧವ್ ಮೊದಲಿಗರಲ್ಲ!
1999-2009ರ ಅವಧಿಯಲ್ಲಿ ವಿತ್ತ, ಯೋಜನೆ, ಇಂಧನ, ಉನ್ನತ ಶಿಕ್ಷಣ, ಮೆಡಿಕಲ್ ಶಿಕ್ಷಣ ಮುಂತಾದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಕ್ಕರೆ ಕಾರ್ಖಾನೆ ಸಹಕಾರ ನಿಯಮಿತ ಸಂಸ್ಥೆ( ಎನ್ ಎಫ್ ಸಿಎಸ್ ಎಫ್) ನ ಮುಖ್ಯಸ್ಥರಾಗಿದ್ದಾರೆ.
ದಿಲೀಪ್ ಅವರಿಗೂ ಮುನ್ನ ಬಿಜೆಪಿಯ ಕಾಳಿದಾಸ್ ಕೊಲಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಎಂದು ನೇಮಿಸಲಾಗಿತ್ತು. ಶನಿವಾರದಂದು ಹೊಸ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.
ಶಿವಾಜಿ ಪಾರ್ಕ್: ಶಿವಸೇನಾ-ಮರಾಠಿಗರ ಹೆಮ್ಮೆಯ ತಾಣದ ಸುತ್ತಾ ಮುತ್ತಾ
ಸದನದ ನಡಾವಳಿ, ವಿಶ್ವಾಸಮತಯಾಚನೆಗೆ ಎಷ್ಟು ಕಾಲಾವಕಾಶ ನೀಡಬೇಕು ಎಂಬುದು ಸ್ಪೀಕರ್ ನಿರ್ದೇಶನದಂತೆ ನಡೆಯಲಿದೆ. ವಿಶ್ವಾಸಮತ ಯಾಚನೆ ಚರ್ಚೆ ಕಾಲಾವಧಿ, ಸದನದ ನಡಾವಳಿ ಬಗ್ಗೆ ಸ್ಪೀಕರ್ ನಿರ್ಣಯ ಅಂತಿಮವಾಗಿರುತ್ತದೆ.