ಶರದ್ ಪವಾರ್-ಉದ್ಧವ್ ಠಾಕ್ರೆ ಭೇಟಿ ಹಿಂದಿನ ರಹಸ್ಯವೇನು?
ಮುಂಬೈ,
ಸಪ್ಟೆಂಬರ್.27:
ಮಹಾರಾಷ್ಟ್ರದ
ಮಾಜಿ
ಸಿಎಂ
ದೇವೇಂದ್ರ
ಫಡ್ನವೀಸ್
ಮತ್ತು
ಶಿವಸೇನೆ
ಸಂಸದ
ಸಂಜಯ್
ರಾವತ್
ಭೇಟಿ
ಬೆನ್ನಲ್ಲೇ
ರಾಜ್ಯ
ರಾಜಕಾರಣ
ಚುರುಕು
ಪಡೆದುಕೊಂಡಿದೆ.
ಸಾಮ್ನಾ
ಪತ್ರಿಕೆ
ವರದಿ
ಬೆನ್ನಲ್ಲೇ
ರಾಷ್ಟ್ರೀಯ
ಕಾಂಗ್ರೆಸ್
ಪಕ್ಷದ
ಮುಖ್ಯಸ್ಥ
ಶರದ್
ಪವಾರ್,
ಸಿಎಂ
ಉದ್ಧವ್
ಠಾಕ್ರೆ
ನಿವಾಸಕ್ಕೆ
ಭೇಟಿ
ನೀಡಿದ್ದಾರೆ.
ರಾಷ್ಟ್ರೀಯ
ಕಾಂಗ್ರೆಸ್
ಪಕ್ಷ(ಎನ್
ಸಿಪಿ)
ಜೊತೆ
ಶಿವಸೇನೆ
ಮೈತ್ರಿಯಲ್ಲಿ
ಬಿರುಕು
ಮೂಡಿದೆ
ಎನ್ನುವ
ಸುದ್ದಿ
ಹರಿದಾಡುತ್ತಿತ್ತು.
ಈ
ಹಿನ್ನೆಲೆ
ಸಿಎಂ
ನಿವಾಸಕ್ಕೆ
ಭೇಟಿ
ನೀಡಿದ
ಎನ್
ಸಿಪಿ
ಮುಖ್ಯಸ್ಥ
ಶರದ್
ಪವಾರ್,
40
ನಿಮಿಷಗಳ
ಕಾಲ
ಉದ್ಧವ್
ಠಾಕ್ರೆ
ಅವರ
ಜೊತೆಗೆ
ಚರ್ಚೆ
ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ
ಕುತೂಹಲ
ಕೆರಳಿಸಿದ
ಇಬ್ಬರು
ನಾಯಕರ
ಭೇಟಿ
ಮಹಾರಾಷ್ಟ್ರದಲ್ಲಿ
ಕೊರೊನಾವೈರಸ್
ಸೋಂಕಿನ
ಹರಡುವಿಕೆ
ಮತ್ತು
ಸೋಂಕಿ
ನಿಯಂತ್ರಣ
ಕ್ರಮಗಳ
ಬಗ್ಗೆ
ಚರ್ಚಿಸಿದ್ದಾರೆ
ಎಂದು
ಹೇಳಲಾಗುತ್ತಿದೆ.
ಆದರೆ
ಅಸಲಿಗೆ
ಉಭಯ
ನಾಯಕರ
ನಡುವೆ
ನಡೆದ
ಚರ್ಚೆ
ಏನು
ಎಂಬುದರ
ಬಗ್ಗೆ
ಮಾಹಿತಿ
ಸಿಕ್ಕಿಲ್ಲ
ಎಂದು
ಪಿಟಿಐ
ವರದಿ
ಮಾಡಿದೆ.
ಫಡ್ನವೀಸ್
ಭೇಟಿ
ಹಿಂದೆ
ರಾಜಕೀಯವಿಲ್ಲ:
ಮಹಾರಾಷ್ಟ್ರದ
ಮಾಜಿ
ಸಿಎಂ
ದೇವೇಂದ್ರ
ಫಡ್ನವೀಸ್
ಭೇಟಿ
ಹಿಂದೆ
ಯಾವುದೇ
ರಾಜಕೀಯ
ಉದ್ದೇಶವಿಲ್ಲ
ಎಂದು
ಶಿನಸೇನೆ
ಮುಖಂಡ
ಹಾಗೂ
ಸಂಸದ
ಸಂಜಯ್
ರಾವತ್
ಈಗಾಗಲೇ
ಸ್ಪಷ್ಟನೆ
ನೀಡಿದ್ದಾರೆ.
"ಅವರು
ರಾಜ್ಯದ
ಮಾಜಿ
ಮುಖ್ಯಮಂತ್ರಿ.
ಅಲ್ಲದೇ
ಮಹಾರಾಷ್ಟ್ರದಲ್ಲಿ
ವಿರೋಧ
ಪಕ್ಷದ
ನಾಯಕರಾಗಿದ್ದು,
ಬಿಹಾರ
ವಿಧಾನಸಭಾ
ಚುನಾವಣೆಗೆ
ಬಿಜೆಪಿ
ಉಸ್ತುವಾರಿ
ವಹಿಸಿಕೊಂಡಿದ್ದಾರೆ.
ನಮ್ಮಿಬ್ಬರ
ಸೈದ್ಧಾಂತಿಕ
ಚಿಂತನೆಗಳು
ವಿಭಿನ್ನವಾಗಿವೆಯೇ
ಹೊರತೂ
ನಾವಿಬ್ಬರೂ
ವೈರಿಗಳಲ್ಲ.
ನಮ್ಮ
ಭೇಟಿಯ
ಬಗ್ಗೆ
ಮುಖ್ಯಮಂತ್ರಿಯವರಿಗೂ
ತಿಳಿದಿದೆ"
ಎಂದು
ಸಂಸದ
ಸಂಜಯ್
ರಾವತ್
ಹೇಳಿದ್ದಾರೆ.
ಮುಂಬೈ
ಉಪನಗರದಲ್ಲಿ
ಇರುವ
ಪಂಚತಾರಾ
ಹೋಟೆಲ್
ನಲ್ಲಿ
ಸಂಸದ
ಸಂಜಯ್
ರಾವತ್
ಮತ್ತು
ಮಾಜಿ
ಮುಖ್ಯಮಂತ್ರಿ
ದೇವೇಂದ್ರ
ಫಡ್ನವೀಸ್
ಭೇಟಿ
ಮಾಡಿದ್ದರು.
ಶಿವಸೇನೆ
ಮತ್ತು
ಎನ್
ಸಿಪಿ
ನಡುವಿನ
ರಾಜಕೀಯ
ತಿಕ್ಕಾಟದ
ನಡುವೆ
ಉಭಯ
ನಾಯಕರ
ಭೇಟಿಯೂ
ತೀವ್ರ
ಕುತೂಹಲ
ಮತ್ತು
ಚರ್ಚೆಗೆ
ಗ್ರಾಸವಾಗಿತ್ತು.