"ಮೋದಿ ಅಲೆ ಹಾವು-ಮುಂಗುಸಿಗಷ್ಟೇ: ಹುಲಿಯನ್ನು ಪಳಗಿಸುವುದಕ್ಕಲ್ಲ!"
ಮುಂಬೈ, ಏಪ್ರಿಲ್ 10: "ಮೋದಿ ಅಲೆ ಯಾವತ್ತಿದ್ದರೂ ಕೇವಲ ಹಾವು-ಮುಂಗುಸಿಯನ್ನು ಮಾತ್ರ ಅಳಿಸಿಹಾಕಬಹುದು. ಆದರೆ ಅದಕ್ಕೆ ಎಂದಿಗೂ ಹುಲಿಯನ್ನು ಪಳಗಿಸುವುದಕ್ಕೆ ಸಾಧ್ಯವಿಲ್ಲ" ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ಬಿಜೆಪಿ ಸಂಸ್ಥಾಪನಾ ದಿನದಂದು ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, 'ಪ್ರಧಾನಿ ಮೋದಿ ಅಲೆಯ ವಿರುದ್ಧ ಹೋರಾಡಲು ಹಾವು-ಮುಂಗುಸಿ, ನಾಯಿ-ಬೆಕ್ಕುಗಳೆಲ್ಲ ಒಂದಾಗಿವೆ' ಎಂದು ಕೇಂದ್ರದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಎಲ್ಲ ವಿಪಕ್ಷಗಳೂ ಒಂದಾಗುತ್ತಿರುವ ಬಗ್ಗೆ ಟೀಕಿಸಿದ್ದರು.
ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿದ ಅಮಿತ್ ಶಾ ಗೆ BSP ತಿರುಗೇಟು
ಈ ಮಾತಿಗೆ ಪ್ರತಿಕ್ರಿಯೆ ನೀಡೀದ ಶಿವಸೇನೆ, "ಬಿಜೆಪಿ ಇನ್ನೂ 2014 ರ ಚುನಾವಣೆಯ ಭ್ರಮೆಯಲ್ಲಿದೆ. 2019 ರಲ್ಲೂ ಅದೇ ಮುಂದುವರಿಯುತ್ತದೆ ಎಂದುಕೊಂಡಿದ್ದರೆ ಅದು ಸಂಪೂರ್ಣ ತಪ್ಪು. ಈಗಾಗಲೇ ಉತ್ತರ ಪ್ರದೇಶದ ಗೋರಕ್ಪುರ ಮತ್ತು ಫುಲ್ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಅದು ಮುಂಬರುವ ಚುನಾವಣೆಗೆ ಕೈಗನ್ನಡಿ" ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.