ಥಾಣೆ; ಗುಂಡು ಹಾರಿಸಿ ಎಂಎನ್ಎಸ್ ನಾಯಕನ ಹತ್ಯೆ
ಮುಂಬೈ, ನವೆಂಬರ್ 23 : ಅಪರಿಚಿತರು ಮಹಾರಾಷ್ಟ್ರ ನವನಿರ್ಮಣ್ ಸೇನಾ ನಾಯಕನನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ ಜಮೀಲ್ ಶೇಖ್ (49) ಎಂಬ ಮಹಾರಾಷ್ಟ್ರ ನವನಿರ್ಮಣ್ ಸೇನಾ (ಎಂಎನ್ಎಸ್) ನಾಯಕನನ್ನು ಥಾಣೆಯಲ್ಲಿ ಹತ್ಯೆ ಮಾಡಲಾಗಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಮಹಾರಾಷ್ಟ್ರ: ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೊನೆಗೂ ಅನುಮತಿ
ಜಮೀಲ್ ಶೇಖ್ ಬೈಕ್ನಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬೈಕ್ನಲ್ಲಿ ಜಮೀಲ್ ಒಬ್ಬರೇ ಹೋಗುತ್ತಿದ್ದರು. ಗುಂಡಿನ ದಾಳಿಯಿಂದ ಕುಸಿದು ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ; ಚನ್ನಪಟ್ಟಣದಲ್ಲಿ ಪ್ರತಿಭಟನೆ
ಮುಂಬೈ ಮಿರರ್ ಪತ್ರಿಕೆ ಜಮೀಲ್ ಶೇಖ್ ಮೇಲೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಬೈಕ್ನಲ್ಲಿ ಬಂದಿದ್ದ ವ್ಯಕ್ತಿಗಳು ಯಾರು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಯ್ಯಯ್ಯೋ, ಇಲ್ನೋಡಿ, ಥಾಣೆ ರಸ್ತೆಯಲ್ಲೊಬ್ಬ ತಲೆಯಿಲ್ಲದ ಮನುಷ್ಯ!
ಎಂಎನ್ಎಸ್ ನಾಯಕ ಜಮೀಲ್ ಶೇಖ್ ಥಾಣೆಯ ಸಿವಿಕ್ ವಾರ್ಡ್ ಅಧ್ಯಕ್ಷರಾಗಿದ್ದರು. ರಾಜಕೀಯ ದ್ವೇಷದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರಿಶೀಲನೆ ಮುಂದುವರೆದಿದೆ.
Recommended Video
ಘಟನೆ ನಡೆದ ಪ್ರದೇಶ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಹತ್ಯೆ ನಡೆದಿದೆಯೇ? ಎಂದು ತನಿಖೆ ಕೈಗೊಂಡಿದ್ದಾರೆ.