ಪ್ರಜ್ಞೆ ತಪ್ಪಿಸಿ, ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ರಾಡ್ ತುರುಕಿದ ನೀಚ
ನಾಗ್ಪುರ, ಜನವರಿ 29: ಮಹಾರಾಷ್ಟ್ರದ ನಾಗ್ಪುರದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ರಾಕ್ಷಸ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ್ದಾನೆ.
Recommended Video
ಮಾನವೀಯತೆ ಇರುವ ಬಗ್ಗೆಯೇ ಅನುಮಾನ ಮೂಡಿಸುವ ಈ ಪ್ರಕರಣ ನಡೆದಿರುವುದು ನಾಗ್ಪುರ ಬಳಿಯ ಪರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೈಶಾಚಿಕ ಕೃತ್ಯ ಎಸಗಿರುವ ಯೋಗಿಲಾಲ್ ರಹಾಂಗ್ದಲೆಯನ್ನು (52) ಅನ್ನು ಪೊಲೀಸರು ಬಂಧಿಸಿದ್ದಾರೆ.
ಚಲಿಸುವ ಕಾರಿನಲ್ಲೇ ದುಷ್ಟರ ಕ್ರೌರ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ!
ಸಂತ್ರಸ್ತೆ, ಆಕೆಯ ಸಹೋದರ, ಸಹೋದರಿ ಮತ್ತು ಆರೋಪಿ ಯೋಗಿಲಾಲ್ ಒಂದೇ ಸಣ್ಣ ಕೊಠಡಿಯಲ್ಲಿ ವಾಸವಿದ್ದರು. ಆರೋಪಿ ಯೋಗಿಲಾಲ್ ಮಿಲ್ ಒಂದರಲ್ಲಿ ಮೇಲ್ವಿಚಾರಕನಾಗಿದ್ದ, ಸಂತ್ರಸ್ತೆಯು ಅದೇ ಮಿಲ್ನಲ್ಲಿ ಕೂಲಿ ಮಾಡುತ್ತಿದ್ದರು.
ಸಂತ್ರಸ್ತೆಯ ಸಹೋದರ-ಸಹೋದರಿ ಗ್ರಾಮಕ್ಕೆ ತೆರಳಿದ್ದಾಗ ರಾತ್ರಿ ಯುವತಿ ಒಬ್ಬಳೇ ಇದ್ದ ಸಮಯ ನೋಡಿ ಆರೋಪಿಯು ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ, ಯುವತಿಯು ತಡೆದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ, ಆಕೆ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ್ದಾನೆ.
ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!
ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ರಾಕ್ಷಸ
ಸಂತ್ರಸ್ತೆಯ ಸಹೋದರ-ಸಹೋದರಿ ಗ್ರಾಮಕ್ಕೆ ತೆರಳಿದ್ದಾಗ ರಾತ್ರಿ ಯುವತಿ ಒಬ್ಬಳೇ ಇದ್ದ ಸಮಯ ನೋಡಿ ಆರೋಪಿಯು ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ, ಯುವತಿಯು ತಡೆದಾಗ ಆಕೆಯ ಬಾಯಿಗೆ ಬಟ್ಟೆ ತುರುಕಿ, ಆಕೆ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ್ದಾನೆ.
ಘಟನೆ ನಡೆದ ಎರಡು ದಿನದ ನಂತರ ದೂರು
ಘಟನೆಯು ಜನವರಿ 21 ರಂದು ನಡೆದಿದೆ. ಆಕೆಯ ಸಹೋದರ ಊರಿನಿಂದ ವಾಪಸ್ ಬಂದ ನಂತರ ಯುವತಿಯು ಘಟನೆಯ ಬಗ್ಗೆ ತಿಳಿಸಿದ್ದು, ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲೂ ಇದೇ ಮಾದರಿ ಅತ್ಯಾಚಾರ ನಡೆದಿತ್ತು
ದೆಹಲಿಯ ನಿರ್ಭಯಾ ಅತ್ಯಾಚಾರ ಸಹ ಇದೇ ರೀತಿ ಅಮಾನವೀಯವಾಗಿ ನಡೆದಿತ್ತು. ಆಕೆಯನ್ನು ಚಲಿಸುವ ಬಸ್ನಲ್ಲಿ ಕೆಲವು ದುರುಳರು ಅತ್ಯಾಚಾರ ನಡೆಸಿ, ಗುಪ್ತಾಂಗದೊಳಕ್ಕೆ ಕಬ್ಬಿಣದ ವಸ್ತುಗಳನ್ನು ತುರುಕಿದ್ದರು. ಆ ಪ್ರಕರಣದ ನಾಲ್ವರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ.
ಅತ್ಯಾಚಾರ ಪ್ರಕರಣಗಳು ಕಡಿಮೆ ಆಗುತ್ತಲೇ ಇಲ್ಲ
ಅತ್ಯಾಚಾರ ತಡೆಗಟ್ಟಲು ಸರ್ಕಾರಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇವೆ. ಕಠಿಣಾತಿ ಕಠಿಣ ಕಾನೂನನ್ನು ಈ ಕುರಿತಂತೆ ಜಾರಿಗೆ ತರಲಾಗುತ್ತಿದೆ. ಆದದೂ ಸಹ ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆಯೇ ವಿನಃ ಕಡಿಮೆ ಆಗುತ್ತಿಲ್ಲ.