ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇವಲ ಐದು ರುಪಾಯಿಗೆ ವೃದ್ಧನ ಹೊಡೆದು ಕೊಂದರು!
ಮುಂಬೈ, ಫೆಬ್ರವರಿ 26; ಕೇವಲ ಐದು ರುಪಾಯಿ ಚಿಲ್ಲರೆ ವಾಪಸ್ ನೀಡಿ ಎಂದಿದ್ದಕ್ಕೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ರಾಮದುಲಾರ ಸಿಂಗ್ ಯಾದವ ಎನ್ನುವ 68 ಷರ್ವದ ವ್ಯಕ್ತಿ ಮಂಗಳವಾರ ಸಂಜೆ ಕೊಲೆಯಾಗಿದ್ದಾನೆ.
26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!
ಪಶ್ಚಿಮ ಬೋರಿವಲಿಯ ಮಾಗತಾನೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿ ವೃದ್ದ ರಾಮದುಲಾರ ಸಿಂಗ್ ಯಾದವ 5 ರುಪಾಯಿ ಚಿಲ್ಲರೆ ವಾಪಸ್ ಕೇಳಿದ್ದಾರೆ. ಮಾತಿಗೆ ಮಾತು ಬೆಳೆದು ಪೆಟ್ರೋಲ್ ತುಂಬಿಸುವ ಸುಮಾರು 5 ಜನ ಸಿಬ್ಬಂದಿ ರಾಮದುಲಾರ್ನನ್ನು ಹೊಡೆದು ಕೊಂದಿದ್ದಾರೆ ಎಂದು ಬೊರಿವಿಲಿ ಪೊಲೀಸ್ ತಿಳಿಸಿದ್ದಾರೆ.
ಈ ಕುರಿತು ಮೃತ ರಾಮದುಲಾರ್ ಪುತ್ರ ಸಂತೋಷ್ ಯಾದವ್ ಬೊರಿವಲಿಯ ಕಸ್ತೂರಿ ಬಾ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Man Beaten And Killed For Only 5 Rupees In Borivali Mumbai. Petrol buk staff involved in this incident.
Story first published: Wednesday, February 26, 2020, 19:36 [IST]