16ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದು ಜೈಲು ಸೇರಿದ
ಥಾಣೆ, ಡಿಸೆಂಬರ್ 17: ಹದಿನಾರನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕನ್ನು ಎಸೆದು ಕೊಂದವನನ್ನು ಪೊಲೀಸರು ಬಂಧಿಸಿದ್ದಾರೆ.
ಪಕ್ಕದ ಮನೆಯವರ ಬೆಕ್ಕನ್ನು 15 ನೇ ಅಂತಸ್ತಿನಿಂದ ನೂಕಿ ಕೊಲೆ ಮಾಡಿದ್ದಾರೆ ಎಂದು ಬೆಕ್ಕಿನ ಮಾಲೀಕ ನೀಡಿದ್ದ ದೂರಿನನ್ವಯ ಬಂಧಿಸಲಾಗಿದೆ.
ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್
ಶಿವರಾಮ್ (64) ಬಂಧಿತ ಆರೋಪಿ, ಅವರು ಮಗ, ಸೊಸೆಯೊಂದಿಗೆ ಟೆಟೋನಿಯಾದ ಕಟ್ಟಡವೊಂದರಲ್ಲಿ ವಾಸವಿದ್ದರು. ಅದೇ ಕಟ್ಟಡದ ಎರಡನೇ ಅಂತಸ್ತಿನಲ್ಲಿದ್ದ ಅಬ್ದುಲ್ ಶೇಕ್ ಎಂಬುವವರ ಮನೆಯ ಬೆಕ್ಕನ್ನು ಶಿವರಾಮ್ ಅವರ ಮೊಮ್ಮಗ ಆಟವಾಡಲು ತಂದಿದ್ದ ಅದರಿಂದ ತೀವ್ರ ಕಿರಿಕಿರಿ ಉಂಟಾಗಿ ಬಾಲ್ಕನಿಯಿಂದ ಕೆಳೆಗೆ ಎಸೆದಿದ್ದಾರೆ.
ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ
ಅದಾದ ಬಳಿಕ ಬೆಕ್ಕಿನ ಮಾಲೀಕರು ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿ ನೋಡಿದ ಬಳಿಕ ಬಾಲ್ಕನಿಯಿಂದ ಎಸೆದಿದ್ದು ಬೆಳಕಿಗೆ ಬಂದಿದೆ. ಪ್ರಾಣಿಯನ್ನು ಹತ್ಯೆ ಮಾಡಿದ ಆರೋಪದಡಿ ಶಿವರಾಮ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.