ಸರ್ಕಾರ ರಚಿಸುವ ಚಾನ್ಸೇ ಇಲ್ಲ; ನಿಲುವು ಬದಲಾಯಿಸಲ್ಲ ಎಂದ ಉದ್ಧವ್ ಠಾಕ್ರೆ
ಮುಂಬೈ,
ನವೆಂಬರ್.09:
ರಾಜಕಾರಣದಲ್ಲಿ
ಯಾರು
ಮಿತ್ರರಲ್ಲ,
ಯಾರೂ
ಶತ್ರುಗಳಲ್ಲ.
ಈ
ಮಾತು
ಮಹಾರಾಷ್ಟ್ರ
ರಾಜಕಾರಣದಲ್ಲಿ
ಅಕ್ಷರಶಃ
ಸತ್ಯವಾಗಿದೆ.
ವಿಧಾನಸಭಾ
ಚುಿನಾವಣೆಗೂ
ಮೊದಲು
ಭಾಯಿ
ಭಾಯಿ
ಎನ್ನುತ್ತಿದ್ದ
ಬಿಜೆಪಿ
ಹಾಗೂ
ಶಿವಸೇನೆ
ನಾಯಕರು
ಇದೀಗ
ದುಷ್ಮನ್
ಆಗಿ
ಬಿಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ
ವಿಧಾನಸಭಾ
ಚುನಾವಣೆಗೂ
ಮೊದಲು
ಮೈತ್ರಿ
ಮಾಡಿಕೊಂಡಿದ್ದ
ಉಭಯ
ಪಕ್ಷಗಳು,
ಫಲಿತಾಂಶ
ಹೊರ
ಬೀಳುತ್ತಿದ್ದಂತೆ
ಗದ್ದುಗೆ
ಹಿಡಿಯಲು
ಗುದ್ದಾಡುತ್ತಿವೆ.
ಮೈತ್ರಿ
ಮೂಲಕ
ಸರ್ಕಾರ
ರಚನೆ
ಮಾಡುವ
ಬದಲು
ಮುಖ್ಯಮಂತ್ರಿ
ಕುರ್ಚಿಗಾಗಿ
ಕಿತ್ತಾಡುತ್ತಿವೆ.
105
ಸ್ಥಾನಗಳಲ್ಲಿ
ಗೆಲುವು
ದಾಖಲಿಸಿರುವ
ಬಿಜೆಪಿ
ಸಿಎಂ
ಸೀಟ್
ಬಿಟ್ಟುಕೊಡಲು
ಒಪ್ಪುತ್ತಿಲ್ಲ.
56
ಸ್ಥಾನಗಳಲ್ಲಿ
ಗೆಲುವು
ದಾಖಲಿಸಿರುವ
ಶಿವಸೇನೆ
ಮುಖ್ಯಮಂತ್ರಿ
ಗಾದಿಗಾಗಿ
ಪಟ್ಟು
ಹಿಡಿದು
ಕುಳಿತಿದೆ.
ಮಹಾರಾಷ್ಟ್ರ
ರಾಜಕೀಯ;
ಅಮಿತ್
ಶಾ
ಅಂತಿಮ
ತೀರ್ಮಾನ
ಸದ್ಯದ
ರಾಜಕೀಯ
ಗೊಂದಲಗಳಿಂದ
ರೋಸಿ
ಹೋದ
ಮುಖ್ಯಮಂತ್ರಿ
ದೇವಂದ್ರ
ಫಡ್ನವೀಸ್
ತಮ್ಮ
ಮುಖ್ಯಮಂತ್ಪಿ
ಸ್ಥಾನಕ್ಕೆ
ಈಗಾಗಲೇ
ರಾಜೀನಾಮೆ
ನೀಡಿದ್ದಾರೆ.
ರಾಜ್ಯದಲ್ಲೀಗ
ರಾಷ್ಟ್ರಪತಿ
ಆಳ್ವಿಕೆ
ಜಾರಿಗೆ
ಬರುವಂತಾ
ಪರಿಸ್ಥಿತಿ
ನಿರ್ಮಾಣವಾಗಿದೆ.
ಹೀಗಿದ್ದರೂ
ಕೂಡಾ
ಶಿವಸೇನೆ
ಮುಖ್ಯಸ್ಥ
ಉದ್ಧವ್
ಠಾಕ್ರೆ,
ರಾಜಿಯಾಗುವ
ಪ್ರಶ್ನೆಯೇ
ಇಲ್ಲ
ಎಂದು
ಕಡ್ಡಿ
ಮುರಿದ
ಹಾಗೆ
ಹೇಳಿದ್ದಾರೆ.
ಬಿಜೆಪಿ 50-50 ಅನುಸಾರವಾಗಿ ಸಚಿವ ಸಂಪುಟ ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ಆದರೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಹಂಚಿಕೆ ಆಗದೇ ಮೈತ್ರಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ. ಅಲ್ಲದೇ ಮತದಾನ ಪೂರ್ವದಲ್ಲಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆವು ಎಂಬ ರಾಗ ಹಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂಬ ಆರೋಪವನ್ನು ಕೂಡಾ ಶಿವಸೇನೆ ಮಾಡಿದೆ. ಈ ಹಿನ್ನೆಲೆಯಲ್ಲಿಯೇ ಶಿವಸೇನೆಯ ಶಾಸಕರನ್ನು ರಾಜಸ್ಥಾನದ ರೆಸಾರ್ಟ್ ಗೆ ಕಳುಹಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ನೊಂದು ಮುಖ್ಯಮಂತ್ರಿ ದೇವಂದ್ರ ಫಡ್ನವೀಸ್ ನಿನ್ನೆ ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.