ಶನಿವಾರವೂ ಅಂಗಡಿ-ಹೋಟೆಲ್ ಓಪನ್: ಮಹಾರಾಷ್ಟ್ರದ ಲಾಕ್ಡೌನ್ ಸಡಿಲಿಕೆ
ಮುಂಬೈ,
ಜುಲೈ
29:
ಮಹಾರಾಷ್ಟ್ರದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ಇಳಿಮುಖವಾದ
ಹಿನ್ನೆಲೆ
ವಾರಾಂತ್ಯದಲ್ಲೂ
ಅಂಗಡಿ
ಮುಂಗಟ್ಟುಗಳನ್ನು
ತೆರೆಯುವುದಕ್ಕೆ
ಅನುಮತಿ
ನೀಡಲಾಗುವುದು
ಎಂದು
ಆರೋಗ್ಯ
ಸಚಿವ
ರಾಜೇಶ್
ತೊಪೆ
ಘೋಷಿಸಿದ್ದಾರೆ.
ರಾಜ್ಯದಲ್ಲಿ
ಶನಿವಾರವೂ
ಅಂಗಡಿ
ಮುಂಗಟ್ಟು
ಮತ್ತು
ಹೋಟೆಲ್
ತೆರೆಯುವುದಕ್ಕೆ
ಅವಕಾಶ
ನೀಡಲಾಗಿದ್ದು,
ನಿಯಮಗಳ
ಪಾಲನೆಯನ್ನು
ಕಡ್ಡಾಯಗೊಳಿಸಲಾಗಿದೆ.
ಮುಂದಿನ
ಎರಡರಿಂದ
ಮೂರು
ದಿನಗಳಲ್ಲಿ
ಅಧಿಕೃತ
ಮಾರ್ಗಸೂಚಿ
ಬಿಡುಗಡೆಯಾಗಲಿದೆ.
ಹೋಟೆಲ್
ಮತ್ತು
ಅಂಗಡಿಗಳ
ಅವಧಿಯನ್ನು
ರಾತ್ರಿ
8ರಿಂದ
9
ಗಂಟೆಗೆ
ಹೆಚ್ಚಿಸಲಾಗಿದೆ.
ಆದರೆ
ಕಾರ್ಯ
ನಿರ್ವಹಿಸುವ
ಸಿಬ್ಬಂದಿಯು
ಲಸಿಕೆ
ಹಾಕಿಸಿಕೊಳ್ಳುವುದು
ಕಡ್ಡಾಯವಾಗಿರುತ್ತದೆ.
ಅಲ್ಲದೇ
ಶೇ.50ರಷ್ಟು
ಸಿಬ್ಬಂದಿ
ಮಾನದಂಡದ
ಮೇಲೆ
ಕಾರ್ಯ
ನಿರ್ವಹಿಸಬೇಕು
ಎಂದಿದ್ದಾರೆ.
"ಮಹಾರಾಷ್ಟ್ರದಲ್ಲಿ ಮಾಸ್ಕ್ ಹಾಕಿಕೊಳ್ಳದಿದ್ದರೆ ಮತ್ತೊಮ್ಮೆ ಲಾಕ್ ಡೌನ್"
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತು ನಗರಗಳಲ್ಲಿ ಕೊರೊನಾವೈರಸ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಸಲಹೆ ನೀಡುವಂತೆ ಕೊವಿಡ್-19 ಕಾರ್ಯ ಪಡೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೂಚನೆ ನೀಡಿದ್ದರು. "ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆರನ್ನು ಭೇಟಿ ಮಾಡಿದ ಕೊವಿಡ್-19 ಕಾರ್ಯಪಡೆಯು ಸೋಂಕಿತ ಪ್ರಕರಣಗಳ ಏರಿಕೆ ಪ್ರಮಾಣ ಕಡಿಮೆಯಾಗಿರುವ 25 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸುವ ಬಗ್ಗೆ ಸಲಹೆ ನೀಡಿದೆ," ಎಂದು ರಾಜೇಶ್ ತೊಪೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ
ಲಾಕ್ಡೌನ್
ಸಡಿಲಿಕೆ:
ಅತಿಹೆಚ್ಚು
ಲಾಕ್ಡೌನ್ನಲ್ಲಿ
ಸಡಿಲಿಕೆ
ಮಾಡಿರುವ
ರಾಜ್ಯಗಳ
ಪಟ್ಟಿಯಲ್ಲಿ
ಮಹಾರಾಷ್ಟ್ರ
ಮೊದಲಾಗುವ
ದಿನಗಳು
ಇನ್ನೇನು
ದೂರವಿಲ್ಲ
ಎಂದು
ಸಚಿವ
ಅಸ್ಲಂ
ಶೇಖ್
ವಿಶ್ವಾಸ
ವ್ಯಕ್ತಪಡಿಸಿದ್ದರು.
"ಮಹಾ
ವಿಕಾಸ್
ಅಗಾದಿ
ಸರ್ಕಾರದ
ಹಲವು
ಸಚಿವರು
ಎರಡೂ
ಡೋಸ್
ಲಸಿಕೆ
ಪಡೆದವರ
ಸಂಚಾರಕ್ಕೆ
ಮುಕ್ತ
ಅವಕಾಶ
ನೀಡಲು
ಮನಸ್ಸು
ಮಾಡಿದ್ದಾರೆ.
ಇದರ
ಜೊತೆ
ಕೆಲವು
ರೆಸ್ಟೋರೆಂಟ್
ಅನ್ನು
ತೆರೆಯುವುದಕ್ಕೆ
ಅವಕಾಶ
ನೀಡಲಾಗುದು,"
ಅಸ್ಲಂ
ಶೇಖ್
ಹೇಳಿದ್ದರು.
ರಾಜ್ಯದಲ್ಲಿ
ಹಂತ
ಹಂತವಾಗಿ
ಲಾಕ್ಡೌನ್
ಸಡಿಲಿಕೆ:
"ಮಹಾರಾಷ್ಟ್ರದಲ್ಲಿ
ಲಾಕ್ಡೌನ್
ಜಾರಿಗೊಳಿಸಿ
ನಾಲ್ಕು
ತಿಂಗಳಲ್ಲಿ
ಹಂತ
ಹಂತವಾಗಿ
ನಿಯಮಗಳನ್ನು
ಸಡಿಲಗೊಳಿಸಲಾಗುತ್ತಿದೆ.
ಎರಡೂ
ಡೋಸ್
ಲಸಿಕೆಯನ್ನು
ಹಾಕಿಸಿಕೊಂಡವರು
ರಾಜ್ಯದಲ್ಲಿ
ಸಂಚರಿಸುವುದಕ್ಕೆ
ಅವಕಾಶ
ನೀಡುವ
ನಿಟ್ಟಿನಲ್ಲಿ
ರಾಜ್ಯ
ಸಂಪುಟದ
ಸಚಿವರು
ಸಮ್ಮತಿ
ಸೂಚಿಸಿದ್ದಾರೆ,"
ಎಂದು
ಅಸ್ಲಂ
ಶೇಖರ್
ಹೇಳಿದ್ದಾರೆ.