ಮಹಾರಾಷ್ಟ್ರದಲ್ಲಿ ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕು ಹೆಚ್ಚಳ: ತಜ್ಞರು
ಮುಂಬೈ,ಫೆಬ್ರವರಿ 21: ಮಹಾರಾಷ್ಟ್ರದಲ್ಲಿ ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ 6281 ಪ್ರಕರಣಗಳು ದಾಖಲಾಗಿದ್ದವು.ಇದರೊಂದಿಗೆ ಸತತ ಐದನೇ ದಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 20,93,913ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂಗೆ ನಿರ್ಧಾರ
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಮತ್ತು ಮುಂಬೈ ಕೊಳಚೆ ಪ್ರದೇಶವಲ್ಲದ ಸ್ಥಳಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್ಡೌನ್ ಹೇರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಕರಣಗಳಲ್ಲಾಗಿರುವ ಏರುಗತಿಯನ್ನು ಕೊರೊನಾದ ಎರಡನೇ ಅಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ, ಜನರು ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಅವರು ತಮ್ಮನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಕೊವಿಡ್ ಟಾಸ್ಕ್ಫೋರ್ಸ್ನ ಮುಖ್ಯಸ್ಥ ಡಾ. ಸಂಜಯ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿಕೊರೊನಾದಿಂದ ಈವರೆಗೆ ಒಟ್ಟು 51,753 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ರಾಜ್ಯದಲ್ಲಿ ಮರಣ ಪ್ರಮಾಣವು ಶೇ.2.47ರಷ್ಟಿದೆ. ಇದು ದೇಶದ ಸಾವಿನ ಪ್ರಮಾಣಕ್ಕಿಂತ ಹೆಚ್ಚಿದೆ.
ಮಹಾರಾಷ್ಟ್ರದಲ್ಲಿ
ದಿನದಿಂದ
ದಿನಕ್ಕೆ
ರೂಪಾಂತರಿ
ಕೊರೊನಾ
ಸೋಂಕಿತರ
ಸಂಖ್ಯೆ
ಹೆಚ್ಚುತ್ತಿದೆ.
ಹೀಗಾಗಿ
ಕರ್ಫ್ಯೂ
ಜಾರಿಗೊಳಿಸಲು
ಸರ್ಕಾರ
ನಿರ್ಧರಿಸಿದೆ.
ಕರ್ಫ್ಯೂ
ಸಮಯದಲ್ಲಿ,
ಮದುವೆ
ಸಭಾಂಗಣಗಳು,
ಮಾರುಕಟ್ಟೆಗಳು,
ಸಿನೆಮಾ
ಹಾಲ್ಗಳು
ಮತ್ತು
ಜನಸಂದಣಿಯು
ಸೇರುವ
ಇತರ
ಸ್ಥಳಗಳೆಲ್ಲವೂ
ಮುಚ್ಚಲ್ಪಡುತ್ತವೆ.
ತರಕಾರಿ
ಮಾರುಕಟ್ಟೆಗಳನ್ನುಸಹ
ಮುಚ್ಚುವ
ಸಂಬಂಧ
ನಾವು
ಯೋಚಿಸುತ್ತಿದ್ದೇವೆ
ಎಂದು
ಸಚಿವರು
ಹೇಳಿದ್ದಾರೆ.
ಸಂಜೆ
5
ಗಂಟೆಯಿಂದ
ಮುಂಜಾನೆ
5
ಗಂಟೆಯವರೆಗೂ
ಅಂದರೆ
12
ಗಂಟೆಗಳ
ನೈಟ್
ಕರ್ಫ್ಯೂ
ಜಾರಿ
ಮಾಡುವ
ಕುರಿತು
ಗಂಭೀರ
ಚಿಂತನೆ
ನಡೆಸಲಾಗಿದೆ.
ಈ
ಬಗ್ಗೆ
ಮಾಹಿತಿ
ನೀಡಿರುವ
ಸಚಿವ
ವಿಜಯ್
ವಾಡೆಟ್ಟಿವಾರ್
ರಾಜ್ಯದಲ್ಲಿ
ಕೋವಿಡ್
ಪರಿಸ್ಥಿತಿ
ನಿಯಂತ್ರಿಸುವ
ನಿಟ್ಟಿನಲ್ಲಿ
ಮುಂದಿನ
ವಾರ
ನಡೆಯಲಿರುವ
ಸಭೆಯಲ್ಲಿ
ನಿರ್ಧರಿಸಲಾಗುತ್ತದೆ
ಎಂದು
ತಿಳಿಸಿದ್ದಾರೆ.
ಇನ್ನು
ಮಹಾರಾಷ್ಟ್ರದಲ್ಲಿ
ಕೋವಿಡ್
ಸೋಂಕಿತರ
ಸಂಖ್ಯೆ
ಗಣನೀವಾಗಿ
ಹೆಚ್ಚಳವಾಗುತ್ತಿದ್ದು,
ಪ್ರತಿನಿತ್ಯ
2000
ಆಸುಪಾಸಿನಲ್ಲಿದ್ದ
ಹೊಸ
ಸೋಂಕಿತರ
ಸಂಖ್ಯೆ
ಈಗ
6
ಸಾವಿರ
ಗಡಿ
ದಾಟಿದೆ.
ಪ್ರಮುಖವಾಗಿ ವಿದರ್ಭ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಶುಕ್ರವಾರ ಕೂಡ ನಾಗ್ಪುರದಲ್ಲಿ 750 ಹೊಸ ಸೋಂಕಿತರ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ ಅಮರಾವತಿ, ವಾರ್ಧಾ ಮತ್ತು ಯವತ್ಮಾಲ್ನಲ್ಲಿ ಸರ್ಕಾರ ಈಗಾಗಲೇ ಭಾಗಶಃ ಲಾಕ್ ಡೌನ್ ಘೋಷಿಸಿದೆ. ಹೊಸ ಪ್ರಕರಣಗಳು ಹೆಚ್ಚಾದರೆ, ಸರ್ಕಾರವು ರಾತ್ರಿ ಕರ್ಫ್ಯೂನಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.