ಮಹಾರಾಷ್ಟ್ರ ಸಂಪುಟ ವಿಸ್ತರಣೆ, ಠಾಕ್ರೆ ಮೊಮ್ಮಗನಿಗೆ ಡಿಸಿಎಂ ಹುದ್ದೆ?
ಮುಂಬೈ, ಜೂನ್ 16: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇಂದು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ.
ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವ ಬೆನ್ನಲ್ಲೇ ಕೊನೆಯ ಹಂತದ ಸಂಪುಟ ವಿಸ್ತರಣೆ ನಡೆಯುತ್ತಿದೆ. ಶಿವಸೇನೆಯ ಇಬ್ಬರು ಹಾಗೂ ಬಿಜೆಪಿಯ ಓರ್ವ ಮುಖಂಡನಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿದೆ.
ಬಿಜೆಪಿಯಿಂದ
ವಿಖೇ
ಪಾಟೀಲ್
ಸಂಪುಟ
ಸೇರುವುದು
ಬಹುತೇಕ
ಖಚಿತವಾಗಿದೆ.
ಮಹಾರಾಷ್ಟ್ರ
ವಿಧಾನಸಭೆಯಲ್ಲಿ
ಪ್ರತಿಪಕ್ಷ
ನಾಯಕರಾಗಿದ್ದ
ಪಾಟೀಲ್
ಇತ್ತೀಚೆಗೆ
ಕಾಂಗ್ರೆಸ್
ತೊರೆದಿದ್ದರು.
ಶಿವಸೇನೆಯಿಂದ ಯುವ ಮುಖಂಡ ಹಾಗೂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆದಿತ್ಯ ಠಾಕ್ರೆಗೆ ನೇರವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇಲ್ಲವಾದಲ್ಲಿ ಹಿರಿಯ ಮುಖಂಡ ಏಕನಾಥ ಶಿಂಧೆಗೆ ಈ ಹುದ್ದೆ ಸಿಗುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಸಮೀಕರಣಗಳನ್ನು ಸರಿದೂಗಿಸಲು ಈ ಸಂಪುಟ ವಿಸ್ತರಣೆಯಲ್ಲಿ ಫಡ್ನವೀಸ್ ಸಾಹಸ ಮೆರೆಯಲಿದ್ದಾರೆ.
ಕಳೆದ ಲೋಕಸಭಾ ಚುನಾವಣೆವರೆಗೂ ಬಿಜೆಪಿ ಹಾಗೂ ಶಿವಸೇನೆ ನಡುವೆ ಕಿತ್ತಾಟ ನಡೆಯುತ್ತಿತ್ತು. ಈಗ ಸಂಬಂಧ ಸುಧಾರಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಹುದ್ದೆ ಮೇಲೆ ಶಿವಸೇನೆ ಕಣ್ಣಿಟ್ಟಿದೆ. 29 ವರ್ಷದ ಯುವ ನಾಯಕ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಶಿವಸೇನೆ ಚಿಂತನೆ ನಡೆಸುತ್ತಿದೆ.