ಲೆಟರ್ ಬಾಂಬ್: ಏನಿದು ಪರಮ್ ಬೀರ್ ಸಿಂಗ್ v/s ಅನಿಲ್ ದೇಶಮುಖ್ ಗಲಾಟೆ
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಪತ್ರ ಬರೆದಿದ್ದು, 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲೂ ಈ ಪತ್ರ ಸಂಚಲನ ಮೂಡಿಸಿದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದಿರುವ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್ ಆರೋಪವನ್ನು ಅಲ್ಲಗೆಳೆದಿದ್ದಾರೆ. ವಿರೋಧ ಪಕ್ಷಗಳು ದೇಶ್ ಮುಖ್ ರಾಜೀನಾಮೆಗೆ ಆಗ್ರಹಿಸಿವೆ.
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಅನಿಲ್ ದೇಶ್ ಮುಖ್ ಸ್ಪಷ್ಟನೆ ನೀಡಿದ್ದಾರೆ.
ವಾಜೆ ಮತ್ತು ಪಾಟೀಲ್ ಅವರು ಸಿಂಗ್
ಅಮಾನತುಗೊಂಡ 16 ವರ್ಷಗಳ ಬಳಿಕ ತಮ್ಮನ್ನು ಕರ್ತವ್ಯಕ್ಕೆ ಪರಿಗಣಿಸಿದ ಕಾರಣಕ್ಕಾಗಿ ವಾಜೆ ಮತ್ತು ಪಾಟೀಲ್ ಅವರು ಸಿಂಗ್ ಅವರಿಗೆ ಹತ್ತಿರವಾಗಿದ್ದರು. ವಾಜೆ ಬಂಧನವಾದಾಗಲೇ ಸಿಂಗ್ ಅವರು ಈ ಬಗ್ಗೆ ಯಾಕೆ ಏನನ್ನೂ ಹೇಳಲಿಲ್ಲ ಎಂದು ದೇಶಮುಖ್ ಪ್ರಶ್ನಿಸಿದ್ದಾರೆ.
''ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದ ಗಂಭೀರ ತನಿಖೆ ಮತ್ತು ಎಸ್ಯುವಿ ಪ್ರಕರಣಕ್ಕೆ ಸಂಬಂಧಿಸಿರುವ ಮನಸುಖ್ ಹಿರೇನ್ ಅವರ ಸಾವಿನಿಂದ ಗಮನ ಬೇರೆಡೆ ಸೆಳೆಯಲು ಪತ್ರವನ್ನು ಬರೆಯಲಾಗಿದೆ. ಆದ್ದರಿಂದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ತನಿಖೆ ಆರಂಭಿಸಬೇಕು'' ಎಂದಿದ್ದಾರೆ.
ಶನಿವಾರ ಸಂಜೆ ಬಿಡುಗಡೆಯಾದ ಪತ್ರ
ಶನಿವಾರ ಸಂಜೆ ಬಿಡುಗಡೆಯಾದ ಪತ್ರದಲ್ಲಿ "ಸಿಂಗ್ ಆರೋಪಗಳು ಆಧಾರರಹಿತವಾಗಿದ್ದು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿಕೂಟ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ದೂಷಿಸುವ ಮತ್ತು ಬೆದರಿಕೆ ಒಡ್ಡುವ ಯತ್ನವಾಗಿದೆ. ಮುಖೇಶ್ ಅಂಬಾನಿ ಅವರ ನಿವಾಸ ʼಆಂಟಿಲಿಯಾʼ ಹೊರಗೆ ಪತ್ತೆಯಾದ ಸ್ಫೋಟಕ ಹೊಂದಿದ್ದ ವಾಹನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಾನು ಸಿಲುಕಿಬೀಳಬಹುದು ಎಂಬ ಕಾರಣಕ್ಕೆ ಸಿಂಗ್ ಈ ಆರೋಪಗಳನ್ನು ಮಾಡಿದ್ದಾರೆ" ಎಂದು ತಿಳಿಸಲಾಗಿದೆ.
ವಾಜೆ ಅವರನ್ನು ಬಳಸಿಕೊಂಡು ಹಣ ಸಂಗ್ರಹಿಸಿದ ಆರೋಪ
ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಳಸಿಕೊಂಡು ಹಣ ಸಂಗ್ರಹಿಸಿದ ಆರೋಪದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು ಕಮಿಷನರೇಟ್ ಹುದ್ದೆಯಿಂದ ತಮ್ಮನ್ನು ತೆಗೆದುಹಾಕುವ ಬಗ್ಗೆ ಅಧಿಕೃತ ಆದೇಶ ನೀಡುವ ಒಂದು ದಿನ ಮೊದಲೇ ತಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಗುತ್ತದೆ ಎಂದು ಸಿಂಗ್ ಅವರಿಗೆ ತಿಳಿದಿತ್ತು. ನಂತರ, ಅವರು ಸಹಾಯಕ ಪೊಲೀಸ್ ಆಯುಕ್ತ ಸಂಜಯ್ ಪಾಟೀಲ್ ಅವರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದರು. ಕೆಲವು ಪ್ರಶ್ನೆಗಳೊಂದಿಗೆ ನಿರೀಕ್ಷಿತ ಉತ್ತರಗಳನ್ನು ಪಡೆದರು ಎಂದು ದೇಶಮುಖ್ ಆರೋಪಿಸಿದ್ದಾರೆ.
ಪತ್ರದ ನೈಜತೆ ಕುರಿತು ಮುಖ್ಯಮಂತ್ರಿ ಕಚೇರಿ ಅನುಮಾನ
ಆದರೆ ಪತ್ರದ ನೈಜತೆ ಕುರಿತು ಮುಖ್ಯಮಂತ್ರಿ ಕಚೇರಿ ಅನುಮಾನ ವ್ಯಕ್ತಪಡಿಸಿದ್ದು ಅದು ಸಿಂಗ್ ಅವರ ಅಧಿಕೃತ ಇಮೇಲ್ ವಿಳಾಸದಿಂದ ಬಂದಿಲ್ಲ ಅಲ್ಲದೆ ಅವರ ಸಹಿಯೂ ಪತ್ರದಲ್ಲಿಲ್ಲ ಎಂದು ಹೇಳಿದೆ. ಇಮೇಲ್ ಅಧಿಕೃತತೆ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ಅದು ಮಾಹಿತಿ ನೀಡಿದೆ.
ಪತ್ರದಲ್ಲಿ ಆರೋಪಿಸಿರುವ ಪ್ರಕಾರ ಮುಂಬೈ ಪೊಲೀಸ್ ಅಪರಾಧ ವಿಭಾಗದ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಅನಿಲ್ ದೇಶಮುಖ್ ಕಳೆದ ಕೆಲವು ತಿಂಗಳುಗಳಿಂದ ಅನೇಕ ಬಾರಿ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ತಮಗೆ ಹಣ ಸಂಗ್ರಹಿಸಿಕೊಡಲು ಸಹಾಯ ಮಾಡುವಂತೆ ಪದೇ ಪದೇ ಸೂಚಿಸುತ್ತಿದ್ದರು. ಈ ವಿಷಯವನ್ನು ನನಗೆ ವಾಜೆ ತಿಳಿಸಿದ್ದರು. ಇದರಿಂದ ಆಘಾತಕ್ಕೊಳಗಾದ ನಾನು ಪರಿಸ್ಥಿತಿಯನ್ನು ಹೇಗೆ ಎದುರಿಸುವುದೆಂದು ಯೋಚಿಸುತ್ತಿದ್ದೆ ಎಂದು ಸಿಂಗ್ ಬರೆದಂತೆ ಇದೆ.
ಮುಂಬೈ ಹುಕ್ಕಾ ಪಾರ್ಲರ್ ಸಭೆ
ಮುಂಬೈ ಹುಕ್ಕಾ ಪಾರ್ಲರ್ಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ನಂತರ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ ಅವರು ಎಸಿಪಿ ಪಾಟೀಲ್ ಅವರನ್ನುದ್ದೇಶಿಸಿ ʼಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್, ರೆಸ್ಟೋರೆಂಟ್ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ ಎಂದು ತಿಳಿಸಿದರು. ಈ ಮಾಹಿತಿಯನ್ನು ಪಾಟೀಲ್ ನನ್ನೊಂದಿಗೆ ಹಂಚಿಕೊಂಡಿದ್ದರು.
ಆಂಟೀಲಿಯಾ
(ಮುಕೇಶ್
ಅಂಬಾನಿ
ಅವರ
ಮನೆ)
ಘಟನೆ
ಕುರಿತು
ಕೆಲ
ದಿನಗಳ
ಹಿಂದೆ
ತಾವು
(ಮುಖ್ಯಮಂತ್ರಿ
ಉದ್ಧವ್
ಠಾಕ್ರೆ)
ಕರೆದಿದ್ದ
ಸಭೆಯಲ್ಲಿ
ಗೃಹಸಚಿವರ
ಹಲವು
ಅಕ್ರಮಗಳನ್ನು
ನಿಮ್ಮ
ಗಮನಕ್ಕೆ
ತಂದೆ.
ಉಪಮುಖ್ಯಮಂತ್ರಿ
ಎನ್ಸಿಪಿ
ಅಧ್ಯಕ್ಷ
ಶರದ್
ಪವಾರ್
ಸೇರಿದಂತೆ
ವಿವಿಧ
ಸಚಿವರಿಗೂ
ಅಕ್ರಮಗಳ
ಬಗ್ಗೆ
ಮಾಹಿತಿ
ನೀಡಿದೆ.
ಮಾಹಿತಿ
ನೀಡುವಾಗ
ಕೆಲವು
ಸಚಿವರಿಗೆ
ನಾನು
ಪ್ರಸ್ತಾಪಿಸಿದ
ಅಂಶಗಳ
ಬಗ್ಗೆ
ಮೊದಲೇ
ಮಾಹಿತಿ
ಇರುವುದನ್ನು
ಗಮನಿಸಿದೆ
ಎಂದು
ಪತ್ರದಲ್ಲಿ
ವಿವರಿಸಲಾಗಿದೆ.
ಪತ್ರದ
ಪೂರ್ಣ
ವಿವರ
ಇಲ್ಲಿ
ಓದಿ