ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ಹೊರಟ ಆಭರಣ ಕೆಲಸಗಾರರು
ಮುಂಬೈ, ಮೇ 31: ಊರುಗಳಿಗೆ ತೆರಳಲು ಹಣವಿಲ್ಲದೆ ಸಾವಿರಾರು ಮಂದಿ ಆಭರಣ ಕೆಲಸಗಾರರು ಶ್ರಮಿಕ್ ರೈಲಿಗಾಗಿ ಕಾದಿದ್ದರು.
ಇದೀಗ ಸಾವಿರಾರು ಮಂದಿ ಖಾಸಗಿ ಬಸ್ಗಳನ್ನು ಬುಕಿಂಗ್ ಮಾಡುತ್ತಿದ್ದಾರೆ. ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದಾರೆ.
ವಲಸೆ ಕಾರ್ಮಿಕರ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಯೋಗಿ ಆದಿತ್ಯನಾಥ್
ಹೌರಾದಿಂದ ಮೂರು ದಿನಗಳ ಕಾಲ ಬಸ್ನಲ್ಲಿ ಪ್ರಯಾಣಿಸಲಿದ್ದಾರೆ. ಪಶ್ಚಿಮ ಬಂಗಾಳ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಂಜೀತ್ ದತ್ತ ಮಾತನಾಡಿ, ನಮ್ಮ ಅನೇಕ ಖಾಸಗಿ ಬಸ್ಗಳು ಹೆಚ್ಚು ಹಣ ಪಡೆಯುವುದಾಗಲಿ, ಪ್ರಯಾಣಿಕರು ಕರೆದಲ್ಲಿಗೆ ಬರುವುದಿಲ್ಲ ಎಂಬುದಾಗಲಿ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಸಾಕಷ್ಟು ಖಾಸಗಿ ಬಸ್ಗಳ ಬಳಿ ಕೇಳಿದಾಗ ಯಾರೂ ಬರಲು ಒಪ್ಪಲಿಲ್ಲ, ಒಬ್ಬರಿಗೆ 15 ಸಾವಿರ ರೂ ಕೇಳಿದರು. ಮೇ 16ರಿಂದ ಪಶ್ಚಿಮ ಬಂಗಾಳದಿಂದ ಮುಂಬೈಗೆ 35-45ಸಾವಿರ ಮಂದಿಯನ್ನು ಕರೆದೊಯ್ದಿದ್ದಾರೆ. ಪ್ರತಿಯೊಬ್ಬರ ಬಳಿ 6,500 ರೂ.ಪಡೆಯಲಾಗುತ್ತಿದೆ.
ಖಾಸಗಿ ಬಸ್ ಚಾಲಕ ಪ್ರಸನ್ಜೀತ್ ರಾಯ್ ಹೇಳುವ ಪ್ರಕಾರ, ಒಂದು ಟ್ರಿಪ್ಗೆ ವ್ಯಕ್ತಿಯಿಂದ 2.30 ಲಕ್ಷರೂ ತೆರೆದುಕೊಳ್ಳಲಾಗುತ್ತದೆ 1.30ಲಕ್ಷ ರೂ ಇಂಧನಕ್ಕೆ ಬೇಕಾಗುತ್ತದೆ ಎಂದಿದ್ದಾರೆ. ಕೆಲವು ಮಾಲಿಕರು ಹಣ ನೀಡಿ ತಮ್ಮ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಊರಿಗೆ ಕಳುಹಿಸಿದ್ದಾರೆ.