ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಪತಿ ದೇಗುಲದಲ್ಲಿ ನೇಣುಬಿಗಿದುಕೊಂಡು ಮಾಜಿ ಶಾಸಕ ಆತ್ಮಹತ್ಯೆ

|
Google Oneindia Kannada News

ಮುಂಬೈ, ಜನವರಿ 17: ಮಾಜಿ ಶಾಸಕ, ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಮುಖಂಡ, ಸಿನಿಮಾ ನಿರ್ಮಾಪಕ ಸದಾನಂದ ಅಲಿಯಾಸ್ ಪಪ್ಪು (51) ಎಂಬುವರು ದೇಗುಲವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೆಟ್ರೋಲ್ ಸುರಿದುಕೊಂಡು ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಾಹುತಿಗೆ ಯತ್ನಪೆಟ್ರೋಲ್ ಸುರಿದುಕೊಂಡು ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಾಹುತಿಗೆ ಯತ್ನ

ಎಂಎಸ್ ಅಲಿ ರಸ್ತೆಯಲ್ಲಿರುವ ಲಂಡಾಚಾ ಗಣಪತಿ ದೇಗುಲದಲ್ಲಿ ನೇಣುಬಿಗಿದುಕೊಂಡು ಸದಾನಂದ ಅವರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್​ನೋಟ್​ ಸಿಕ್ಕಿದೆ.

ಏನೂ ಸಾಧಿಸೋಕೆ ಆಗಲ್ಲ, ಯಾರೂ ಲೈಕ್ ಮಾಡಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ ಏನೂ ಸಾಧಿಸೋಕೆ ಆಗಲ್ಲ, ಯಾರೂ ಲೈಕ್ ಮಾಡಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ

ಮರಾಠಿ ಚಿತ್ರ ನಿರ್ದೇಶಕ, ಎನ್​ಸಿಪಿ ಮಾಜಿ ಎಂಎಲ್​ಎ ಸದಾನಂದ್ ಅವರು ಬರೆದಿರುವ ಡೆತ್ ನೋಟ್ ನಲ್ಲಿ ಬಿಲ್ಡರ್​ವೊಬ್ಬ ನನಗೆ ಚಿತ್ರಹಿಂಸೆ ನೀಡುತ್ತಿದ್ದಾನೆ ಬೇರೆ ದಾರಿ ಕಾಣದೆ ನಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆಯಲಾಗಿದೆ.

Film producer found hanging at Mumbai temple alleged harassment, says police

ದೇಗುಲದ ಆವರಣದಲ್ಲಿರ ಶೆಡ್​ಬಳಿ ಸದಾನಂದ ಅವರ ಶವ ಕಂಡ ದೇಗುಲದ ಪೂಜಾರಿಯೊಬ್ಬರು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.ಸದಾನಂದ್ ಅವರ ಮಗ ಅಂಕುರ್ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಷನ್ 306ರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎಲ್ ಜಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮರಾಠಿ ಚಿತ್ರಗಳನ್ನು ಸದಾನಂದ ಅವರು ನಿರ್ಮಿಸಿದ್ದರು.

English summary
Former member of the Nationalist Congress Party (NCP) Sadanand alias Pappu Lad (51) committed suicide at a temple in south Mumbai's Grant Road locality on Wednesday, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X