ರಜಾ ಮುಗಿಸಿ, ಸಜಾ ಕಳೆಯಲು ಜೈಲಿಗೆ ಸಂಜು ವಾಪಸ್
ಮುಂಬೈ, ಜ. 10: ರಜಾ ಮಜಾ ಮುಗಿಸಿದ ಬಾಲಿವುಡ್ ನಟ ಸಂಜಯ್ ದತ್ ಮತ್ತೆ ಜೈಲಿಗೆ ವಾಪಸ್ಸಾಗಿದ್ದಾರೆ.
ಈಚೆಗಷ್ಟೇ ಅನಾರೋಗ್ಯದ ಕಾರಣದಿಂದ 14 ದಿನಗಳ ರಜೆ ಪಡೆದಿದ್ದ ಸಂಜಯ್ ಮತ್ತೆ 14 ದಿನಗಳ ರಜೆಗಾಗಿ ಅರ್ಜಿ ಗುಜರಾಯಿಸಿದ್ದರು. ಆದರೆ, ಯರವಾಡಾ ಜೈಲು ಅಧಿಕಾರಿಗಳು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ. [ಹೆಂಡ್ತಿ ನೋಡ್ಕೋಬೇಕು ಪೆರೋಲ್ ಕೊಡಿ]
ಸಂಜಯ್ ದತ್ ಪದೇ ಪದೆ ರಜೆ ಪಡೆದು ಹೊರಬರುತ್ತಿರುವುದು ವಿವಾದಕ್ಕೊಳಗಾಗಿತ್ತು. ಬೇರೆ ಖೈದಿಗಳಿಗೆ ಇಲ್ಲದ ಸೌಲಭ್ಯ ಸಂಜಯ್ಗೆ ಮಾತ್ರ ಏಕೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂಬ ಪ್ರಶ್ನೆ ಎದ್ದಿತ್ತು. ಈ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆದೇಶ ಹೊರಡಿಸಿದ್ದರು. [ಸಂಜಯ್ ದತ್ ಗೆ ಮತ್ತೆ ರಜೆ, ತನಿಖೆಗೆ ಆದೇಶ]
"ಕಾನೂನು ಎಲ್ಲರಿಗೂ ಒಂದೇ. ಯಾರಿಗೂ ವಿಶೇಷ ರಿಯಾಯಿತಿ ನೀಡಲಾಗುವುದಿಲ್ಲ. ನಮ್ಮ ಸರ್ಕಾರದಲ್ಲಿ ಯಾರಿಗೂ ತಾರತಮ್ಯ ನಡೆಯಲು ಬಿಡುವುದಿಲ್ಲ" ಎಂದು ದೇವೇಂದ್ರ ಫಡ್ನವಿಸ್ ಟ್ವಿಟ್ಟರ್ನಲ್ಲಿ ಸಂಜಯ್ ದತ್ ರಜೆ ಕುರಿತು ಪ್ರತಿಕ್ರಿಯಿಸಿದ್ದಾರೆ. [ದಾವೂದ್ ಎಲ್ಲೇ ಇದ್ದರೂ ಹಿಡಿದು ತರ್ತೇವೆ]
ಸಂಜಯ್ ದತ್ ಮುಂಬಯಿ ಸ್ಫೋಟ ಪ್ರಕರಣದಲ್ಲಿ ಅಕ್ರಮವಾಗಿ ಎಕೆ-56 ರೈಫಲ್ ಸಂಗ್ರಹಿಸಿದ್ದ ಹಾಗೂ ನಾಶಪಡಿಸಿದ ಅಪರಾಧದಡಿ ಶಿಕ್ಷೆ ಅನುಭವಿಸುತ್ತಿದ್ದಾರೆ.