Breaking News: ಡ್ರಗ್ಸ್ ಪ್ರಕರಣದಲ್ಲಿ ಶಾರೂಕ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ
ಮುಂಬೈ, ಅಕ್ಟೋಬರ್ 20: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ತಿರಸ್ಕರಿಸಿದೆ. ಆರ್ಯನ್ ಖಾನೆ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ.
ಡ್ರಗ್ ಕೇಸ್: ಆರ್ಯನ್ ಖಾನ್ ಭವಿಷ್ಯ ಅಕ್ಟೋಬರ್ 20ರಂದು ನಿರ್ಧಾರ
"ಮುಂಬೈ NDPS ಕೋರ್ಟ್ ನೀಡಿದ ಆದೇಶ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದೇ ಹೈಕೋರ್ಟ್ ಮೊರೆ ಹೋಗಲಾಗುವುದು. ಒಂದು ವೇಳೆ ಇಂದು ಆದೇಶ ಪ್ರತಿ ಸಿಗದಿದ್ದರೆ ಗುರುವಾರ ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗುವುದು," ಎಂದು ಆರ್ಯನ್ ಖಾನ್ ಪರ ವಕೀಲರು ತಿಳಿಸಿದ್ದಾರೆ.
ಆರ್ಯನ್ ಖಾನ್ ಪರ ವಕೀಲರು ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ ನಂತರದಲ್ಲಿ ಎನ್ ಸಿಪಿ ಪರ ವಕೀಲರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸುತ್ತದೆ. ಎನ್ ಸಿಬಿ ಆಕ್ಷೇಪಣೆ ಸಲ್ಲಿಸಿದ ನಂತರದಲ್ಲಿ ವಿಚಾರಣೆ ನಡೆಸಲಿರುವ ಹೈಕೋರ್ಟ್ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಆರ್ಯನ್
ಖಾನ್
ಬಂಧನದ
ಬಗ್ಗೆ
ಪ್ರಶ್ನೆ:
ಕಳೆದ
ಅಕ್ಟೋಬರ್
14ರಂದು
ಮುಂಬೈನ
ವಿಶೇಷ
NDPS
ಕೋರ್ಟ್
ಪ್ರಕರಣರಕ್ಕೆ
ಸಂಬಂಧಿಸಿದಂತೆ
ಆರ್ಯನ್
ಖಾನ್
ಜಾಮೀನು
ಅರ್ಜಿ
ವಿಚಾರಣೆ
ನಡೆಸಿತ್ತು.
ಈ
ಹಿಂದೆ
ಆರ್ಯನ್
ಖಾನ್
ಪರ
ಹಿರಿಯ
ವಕೀಲ
ಅಮಿತ್
ದೇಸಾಯಿ,
'ಅರಬ್ಬಿ
ಸಮುದ್ರದಲ್ಲಿ
ತೇಲುತ್ತಿದ್ದ
ಕ್ರೂಸರ್
ಶಿಪ್ನಲ್ಲಿ
ನಿಗದಿತ
ಕಾರ್ಯಕ್ರಮಕ್ಕೆ
ಅತಿಥಿಯಾಗಿ
ಹೋಗಿದ್ದ
ಆರ್ಯನ್
ಖಾನ್
ಡ್ರಗ್
ಸಾಗಿಸಿಲ್ಲ,
ಡ್ರಗ್ಸ್
ಹೊಂದಿರಲಿಲ್ಲ,
ವಿದೇಶಿ
ಕರೆನ್ಸಿ
ಜಪ್ತಿಯಾಗಿಲ್ಲ,
ಹೀಗಿದ್ದು,
ನನ್ನ
ಕಕ್ಷಿದಾರರ
ಬಂಧನವೇಕೆ?,''
ಎಂದು
ವಾದಿಸಿದ್ದರು.
ಅಕ್ಟೋಬರ್
4ರಿಂದ
ಬಂಧನದಲ್ಲಿ
ಆರ್ಯನ್:
ಕಳೆದ
ಅಕ್ಟೋಬರ್
4ರಂದು
ಶಾರೂಕ್
ಖಾನ್
ಪುತ್ರ
ಆರ್ಯನ್
ಖಾನ್
ಮತ್ತು
ಇತರೆ
ಆರೋಪಿಗಳನ್ನು
ಬಂಧಿಸಲಾಗಿದ್ದು,
ನ್ಯಾಯಾಲಯವು
ಅಕ್ಟೋಬರ್
7ರವರೆಗೆ
ಆರೋಪಿಗಳನ್ನು
ಮೊದಲಿಗೆ
ಎನ್ಸಿಬಿ
ಕಸ್ಟಡಿಗೆ
ನೀಡಿತ್ತು.
ಅಕ್ಟೋಬರ್
8ರಂದು
ಆರ್ಯನ್
ಖಾನ್
ರನ್ನು
ಅರ್ಥರ್
ರಸ್ತೆಯ
ಜೈಲಿನಲ್ಲಿ
ಕೊವಿಡ್-19
ಮಾರ್ಗಸೂಚಿಯಂತೆ
ಇರಿಸಲು
ಕೋರ್ಟ್
ಸೂಚನೆ
ನೀಡಿತ್ತು.