ಬಿಜೆಪಿ ಪರ ನಿಂತಿದ್ದ ಧನಂಜಯ್ ಮುಂಡೆ ಅಚ್ಚರಿಯ ನಡೆ, ವಾಪಸ್ NCP ಕಚೇರಿಗೆ
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪರ ನಿಂತಿದ್ದರು ಎಂದು ನಂಬಲಾದ ಎನ್ ಸಿಪಿಯ ಧನಂಜಯ್ ಮುಂಡೆ ಅವರು ವಾಪಸ್ ಎನ್ ಸಿಪಿ ಕಚೇರಿಗೆ ತೆರಳುವ ಮೂಲಕ ಅಚ್ಚರಿಯ ನಡೆ ಇಟ್ಟಿದ್ದಾರೆ.
ಅಜಿತ್ ಪವಾರ್ ಪ್ರಮಾಣ ವಚನದ ಸಮಯಲ್ಲಿ ಧನಂಜಯ್ ಮುಂಡೆ ಅವರು ಭಾಗಿಯಾಗಿದ್ದರು ಎನ್ನಲಾಗಿತ್ತು. ಆದರೆ ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ಹೇಳಿದ ಮೇಲೆ ಧನಂಜಯ್ ಮುಂಡೆ ಅವರು ಕಚೇರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.
NCP ಜೊತೆ ಮೈತ್ರಿ, ಮೊದಲೇ ಸೂಚನೆ ನೀಡಿದ್ದ ಮೋದಿ, ಪವಾರ್!
ಮಹಾರಾಷ್ಟ್ರದಲ್ಲಿ ಬೆಳಗ್ಗಿನ ಜಾವ ನಡೆದ ಸಿನಿಮೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್ ಸಿಪಿ ಮುಖಂಡ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು.
ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದುಕೊಂಡವರಿಗೆ ಮಹಾರಾಷ್ಟ್ರದ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಅಚ್ಚರಿಯನ್ನುಂಟು ಮಾಡಿತ್ತು.