ನಿಸರ್ಗ ಚಂಡಮಾರುತ: ಮುಂಬೈನಲ್ಲಿ 19 ವಿಮಾನಗಳು ಮಾತ್ರ ಹಾರಾಟ
ಮುಂಬೈ, ಜೂನ್ 3: 'ನಿಸರ್ಗ' ಚಂಡಮಾರುತ ಇಂದು ಮಹಾರಾಷ್ಟ್ರದ ಅಲಿಬಾಗ್ ಪ್ರದೇಶಕ್ಕೆ ಅಪ್ಪಳಿಸಲಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Recommended Video
ನಿಸರ್ಗ ಚಂಡಮಾರುತದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಬುಧವಾರ, ಜೂನ್ 3) ಕೇವಲ 19 ವಿಮಾನಗಳು ಮಾತ್ರ ಕಾರ್ಯನಿರ್ವಹಿಸಲಿದೆ.
ಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆ
ನಿಸರ್ಗ ಚಂಡಮಾರುತದ ಪರಿಣಾಮ ಭಾರಿ ಮಳೆ ಮತ್ತು ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಹಾರಾಟದಲ್ಲಿ ಕಡಿತಗೊಳಿಸಲಾಗಿದೆ.
''ಸದ್ಯದ ಮಾಹಿತಿ ಪ್ರಕಾರ, ಜೂನ್ 3 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ 8 ವಿಮಾನಗಳ ಆಗಮನ, 11 ವಿಮಾನಗಳ ನಿರ್ಗಮನದ ವೇಳಾಪಟ್ಟಿ ಇದೆ. ಚಂಡಮಾರುತದ ಕುರಿತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ'' ಎಂದು ಮುಂಬೈ ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.
ನಿಸರ್ಗ ಚಂಡಮಾರುತದಿಂದಾಗಿ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಮುಂಬೈ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ. ಜೂನ್ 3 ರಂದು ಮುಂಬೈನಿಂದ ಕೇವಲ ಮೂರು ಇಂಡಿಗೋ ವಿಮಾನಗಳು ಮಾತ್ರ ಹಾರಾಡಲಿವೆ.