ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಮುಂಬೈನಲ್ಲಿ ಮಹತ್ವದ ನಿರ್ಧಾರ

|
Google Oneindia Kannada News

ಮುಂಬೈ, ಮೇ 26: ಕೊರೊನಾ ಹಾವಳಿಯಿಂದ ಜಗತ್ತಿನಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ದೇವರು, ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ ಮಾರಕ ಕೊರೊನಾ.

Recommended Video

ಟೀಮ್ ಇಂಡಿಯಾಕ್ಕೆ ಮರಳಲು ಫಿಟ್ ಆದ್ರೂ ಹರ್ಭಜನ್ ಸಿಂಗ್ | Harbhajan Singh Back to team National Team?

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲೇ ಅದ್ದೂರಿಯಾಗಿ ಆಚರಿಸಲಾಗುವ ಮುಂಬೈ ಸಾರ್ವಜನಿಕ ಗಣೇಶೋತ್ಸವಕ್ಕೂ ಕಂಟಕ ಬಂದೊದಗಿದೆ.

ಮುಂಬೈಗೆ ಹೋಗುವ ಮುನ್ನ ಓದಿ; ಸರ್ಕಾರದಿಂದ ಹೊಸ ಮಾರ್ಗಸೂಚಿಮುಂಬೈಗೆ ಹೋಗುವ ಮುನ್ನ ಓದಿ; ಸರ್ಕಾರದಿಂದ ಹೊಸ ಮಾರ್ಗಸೂಚಿ

ಇದರಿಂದ ಈ ವರ್ಷದ ಗಣೇಶ ಚತುರ್ಥಿಯ ಮುಂಬೈ ಸಾರ್ವಜನಿಕ ಗಣೇಶ ಹಬ್ಬವನ್ನು ಮುಂದೂಡಲಾಗಿದೆ. ಇದು ಕೇವಲ ಮುಂಬೈ ಅಲ್ಲದೇ ದೇಶದ ಗಮನವನ್ನೇ ಸೆಳೆದಿದೆ.

ಜಿಎಸ್‌ಬಿ ಮಂಡಳ

ಜಿಎಸ್‌ಬಿ ಮಂಡಳ

ಮುಂಬೈನ ಅತಿದೊಡ್ಡ ಗಣೇಶೋತ್ಸವ ಮಂಡಳವಾದ ವಡಾಲಾದ ಜಿಎಸ್‌ಬಿ ಮಂಡಳ ಮುಂಬೈನಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುತ್ತದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ವಿಜೃಂಭಣೆಯಿಂದ ಮಂಡಳದ ಅಣತಿಯಂತೆ ನೂರಾರು ಗಣೇಶ ಮಂಡಳಗಳು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತವೆ. ಈ ವರ್ಷ ಕೊರೊನಾ ನಿಲ್ಲುವ ಸೂಚನೆಗಳ ಕಾಣುತ್ತಿಲ್ಲವಾದ್ದರಿಂದ ಜಿಎಸ್‌ಬಿ ಮಂಡಳದವರು ಈ ವರ್ಷದ ಗಣೇಶೋತ್ಸವವನ್ನೇ ಮುಂದೂಡಿದ್ದಾರೆ.

ರದ್ದಾಗಿಲ್ಲ, ಮುಂದೂಡಿದ್ದಾರೆ

ರದ್ದಾಗಿಲ್ಲ, ಮುಂದೂಡಿದ್ದಾರೆ

ಅನಿವಾರ್ಯವಾಗಿ ಮುಂಬೈ ಗಣೇಶ ಮಂಡಳದವರು ಈ ಸಾರಿಯ ಗಣೇಶೋತ್ಸವವನ್ನು ಮುಂದೂಡಿದ್ದಾರೆ ಹೊರತು ರದ್ದು ಮಾಡಿಲ್ಲ. 2021 ರ ಫೆಬ್ರವರಿಯ ಮಾಘ ಶುದ್ಧ ಚತುರ್ಥಿಯಲ್ಲಿ ಗಣೇಶೋತ್ಸವವನ್ನು ಆಚರಿಸಲು ಜಿಎಸ್‌ಬಿ ಮಂಡಳ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಳೆದ ಆರವತ್ತು ವರ್ಷಗಳಿಂದ

ಕಳೆದ ಆರವತ್ತು ವರ್ಷಗಳಿಂದ

ಜಿಎಸ್‌ಬಿ ಗಣೇಶೋತ್ಸವ ಮಂಡಳ ಕಳೆದ ಆರವತ್ತು ವರ್ಷಗಳಿಂದ ಮುಂಬೈನಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದೆ. ಪ್ರತಿ ವರ್ಷ ಗಣೇಶ ಚತುರ್ಥಿಯಲ್ಲಿ ವಡಾಲದಲ್ಲಿ ಹತ್ತು ದಿನ ಅದ್ಧೂರಿ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ದೇಶ ವಿದೇಶದಲ್ಲಿ ಜಿಎಸ್‌ಬಿ ಮಂಡಳದ ಗಣೇಶೋತ್ಸವ ಜನಪ್ರಿಯವಾಗಿದೆ.

ಮಹಾರಾಷ್ಟ್ರದಲ್ಲಿ 50,231 ಜನರಿಗೆ ಕೊರೊನಾ ಸೋಂಕು

ಮಹಾರಾಷ್ಟ್ರದಲ್ಲಿ 50,231 ಜನರಿಗೆ ಕೊರೊನಾ ಸೋಂಕು

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ವ್ಯಾಪಕವಾಗಿದೆ ಮಂಗಳವಾರದ ಅಂತ್ಯಕ್ಕೆ 50,231 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದುವರೆಗೆ 1,635 ಜನ ಮೃತಪಟ್ಟಿದ್ದಾರೆ. ಮುಂಬೈ ಒಂದರಲ್ಲಿ 40,438 ಜನರಿಗೆ ಕೊರೊನಾ ತಗುಲಿದೆ. ೧ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕೊರೊನಾ ಮುಂಬೈನಲ್ಲಿ ತೀವ್ರ ಆತಂಕ ಹುಟ್ಟಿಹಾಕಿದೆ.

English summary
Covid19 In Maharastra: This Year Ganesh Festival Postponed In Mumbai Ahead Of Coronavirus. GSB Mandal Every Year Orgnised Public Ganesh Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X