ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ 11,000 ಖೈದಿಗಳ ಬಿಡುಗಡೆ: ಮಹಾ ವಿಪತ್ತು ಕಾದಿದೆ ಜೋಕೆ!

|
Google Oneindia Kannada News

ಮುಂಬೈ, ಮಾರ್ಚ್ 27: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋವಿಡ್-19 ನಿಂದಾಗಿ ಮಹಾರಾಷ್ಟ್ರದಲ್ಲೂ ತಲ್ಲಣ ಸೃಷ್ಟಿಯಾಗಿದ್ದು, 11 ಸಾವಿರ ಖೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಮಹಾಮಾರಿ ಕೊರೊನಾ ವೈರಸ್ ನ ತಡೆಗಟ್ಟಲು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಹೀಗಾಗಿ, 7 ವರ್ಷಕ್ಕಿಂತ ಕಡಿಮೆ ಜೈಲುಶಿಕ್ಷೆಗೆ ಗುರಿಯಾಗಿರುವ ಸುಮಾರು 11 ಸಾವಿರ ಖೈದಿಗಳನ್ನು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಸೂಚಿಸಿದ್ದಾರೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

''ಒಂದು ವೇಳೆ 11 ಸಾವಿರ ಖೈದಿಗಳು ಬಿಡುಗಡೆ ಆದಲ್ಲಿ, ಭವಿಷ್ಯದಲ್ಲಿ ಮಹಾ ವಿಪತ್ತು ಸಂಭವಿಸಲಿದೆ. ಇದು ಲಾಜಿಕಲ್ ನಿರ್ಧಾರ ಅಲ್ಲ'' ಎಂದು ಅನಿಲ್ ದೇಶಮುಖ್ ನಿರ್ಧಾರದ ಬಗ್ಗೆ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಅನಿಲ್ ದೇಶಮುಖ್ ಮಾಡಿರುವ ಟ್ವೀಟ್ ಏನು.?

''ಕೋವಿಡ್-19 ತಡೆಗಟ್ಟುವ ಸಲುವಾಗಿ, ಜೈಲಿನಲ್ಲಿ ಖೈದಿಗಳ ಸಂಖ್ಯೆ ಕಡಿಮೆ ಮಾಡುವ ಸಲುವಾಗಿ, 7 ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಗೆ ಗುರಿಯಾಗಿರುವವರನ್ನು ತುರ್ತು ಪೆರೋಲ್ ಮೂಲಕ ಬಿಡುಗಡೆ ಮಾಡಲು ಸೂಚಿಸಿದ್ದೇನೆ'' ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಟ್ವೀಟ್ ಮಾಡಿದ್ದಾರೆ.

ಟ್ವೀಟಿಗರ ಅಸಮಾಧಾನ

''ಇದು ಲಾಜಿಕಲ್ ನಿರ್ಧಾರ ಅಲ್ಲ. ಈ ನಿಮ್ಮ ನಿರ್ಧಾರದಿಂದ ಭವಿಷ್ಯದಲ್ಲಿ ಮಹಾ ವಿಪತ್ತು ಉಂಟಾಗಬಹುದು. ಖೈದಿಗಳು ಜೈಲಿನಲ್ಲೇ ಇರಲಿ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ'' ಎಂದು ಟ್ವೀಟಿಗರೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!

ಸಮಾಜಕ್ಕೆ ಸಮಸ್ಯೆ ಆಗಲ್ವಾ.?

''ಒಂದಲ್ಲಾ ಒಂದು ಕ್ರೈಂ ಮಾಡಿ ಜೈಲು ಪಾಲಾಗಿರುವವರನ್ನು ಬಿಡುಗಡೆ ಮಾಡಿದರೆ, ಸಮಾಜಕ್ಕೆ ಮತ್ತೆ ತೊಂದರೆ ಉಂಟಾಗುವುದಿಲ್ಲವೇ.? ಕೊರೊನಾ ಸೋಂಕಿತ ವ್ಯಕ್ತಿ ಜೈಲಿನ ಒಳಗೆ ಹೋಗದ ಹೊರತು ಅಲ್ಲಿನ ಎಲ್ಲಾ ಖೈದಿಗಳು ಸೇಫ್ ಆಗಿ ಇರುತ್ತಾರೆ. ಕೊರೊನಾ ನೆಪವಾಗಿದ್ದರೂ, ಬಹುಶಃ ಬಿಡುಗಡೆ ಮಾಡುತ್ತಿರುವುದರ ಹಿಂದೆ ಬೇರೆಯದ್ದೇ ಕಾರಣ ಇದೆ'' ಎಂದು ವಿಜಯ್ ಕುಮಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಮತ್ತೊಮ್ಮೆ ಯೋಚಿಸಿ..

''ಸದ್ಯಕ್ಕೆ ಎಲ್ಲಾ ಖೈದಿಗಳು ಜೈಲಿನಲ್ಲೇ ಸೇಫ್ ಆಗಿದ್ದಾರೆ. ಯಾಕಂದ್ರೆ, ಅವರಿಗೆ ಹೊರಗಿನಿಂದ ಯಾವುದೇ ಹಸ್ತಕ್ಷೇಪ ಇಲ್ಲ. ಹೀಗಾಗಿ, ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಿ'' ಎಂದು ಟ್ವೀಟಿಗರೊಬ್ಬರು ಸಲಹೆ ನೀಡಿದ್ದಾರೆ.

English summary
Coronavirus: 11000 prisoners to be released on Parole in Maharashtra tweets Anil Deshmukh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X