ಬಂಧನದ ಭೀತಿಯಿಂದ ಪಾರಾದ ರಾಧೇ ಮಾ
ಮುಂಬೈ, ಆಗಸ್ಟ್ 14 : ಸ್ವಯಂ ಘೋಷಿತ ದೇವಮಾತೆ ರಾಧೇ ಮಾ ಬಂಧನದ ಭೀತಿಯಿಂದ ಪಾರಾಗಿದ್ದಾಳೆ. ಬಾಂಬೆ ಹೈಕೋರ್ಟ್ ದೇವಮಾತೆಗೆ 2 ವಾರಗಳ ಕಾಲ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಆದೇಶಿಸಿದೆ.
ರಾಧೇ
ಮಾ
ವರದಕ್ಷಿಣೆ
ಕಿರುಕುಳ,
ದೌರ್ಜನ್ಯ
ಪ್ರಕರಣದಲ್ಲಿ
ಬಂಧನದ
ಭೀತಿ
ಎದುರಿಸುತ್ತಿದ್ದರು.
ಆದ್ದರಿಂದ,
ನಿರೀಕ್ಷಣಾ
ಜಾಮೀನು
ನೀಡುವಂತೆ
ಬಾಂಬೆ
ಹೈಕೋರ್ಟ್
ಮೆಟ್ಟಿಲೇರಿದ್ದರು.
ಶುಕ್ರವಾರ
ಅರ್ಜಿಯ
ವಿಚಾರಣೆ
ನಡೆಸಿದ
ಕೋರ್ಟ್
ಎರಡು
ವಾರಗಳ
ಕಾಲ
ರಾಧೇ
ಮಾ
ಬಂಧಿಸುವಂತಿಲ್ಲ
ಎಂದು
ಹೇಳಿದೆ.
[ರಾಧೇ
ಮಾ
ವಿರುದ್ಧ
FIR]
ಗುರುವಾರ ಸ್ಥಳೀಯ ನ್ಯಾಯಾಲಯದಲ್ಲಿ ರಾಧೇ ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು ಮತ್ತು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಶುಕ್ರವಾರ ಈ ಆದೇಶವನ್ನು ಪ್ರಶ್ನಿಸಿ ರಾಧೇ ಮಾ ಪರವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಜಾಮೀನು ನೀಡಿದೆ. [ಮಹಾಜನ್ ಟ್ವೀಟ್ಸ್: ರಾಧೇ ಮಾ ಇನ್ ಮಿನಿ ಸ್ಕರ್ಟ್]
2 ವಾರಗಳ ಕಾಲ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಷರತ್ತುಗಳನ್ನು ವಿಧಿಸಿದೆ. ಆ.19 ಮತ್ತು 26ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕೆಂದು ಷರತ್ತಿನಲ್ಲಿ ತಿಳಿಸಿದೆ.