ಮುಳುಗಿದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಯಿದ್ದ ದೋಣಿ
ಮುಂಬೈ, ಅಕ್ಟೋಬರ್ 24: ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸರಕಾರದ ದೋಣಿಯೊಂದು ಬುಧವಾರ ಪ್ರಾಂಗ್ಸ್ ರೀಫ್ ಲೈಟ್ ಹೌಸ್ ಬಳಿ ಮುಳುಗಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಒಬ್ಬರು ಈಗಲೂ ಪತ್ತೆಯಾಗಿಲ್ಲ.
ಪರಿಹಾರ ಕಾರ್ಯಾಚರಣೆಗಾಗಿ ಎರಡು ಹೆಲಿಕಾಪ್ಟರ್ ಬಳಸಲಾಗುತ್ತಿದೆ. ಸಮುದ್ರ ಕಾವಲು ಪಡೆಯ ವಕ್ತಾರರು ಮಾತನಾಡಿ, ರಕ್ಷಣಾ ಪಡೆಯು ಸ್ಥಳದಲ್ಲೇ ಇದೆ ಎಂದು ಮಾಹಿತಿ ನೀಡಿದ್ದಾರೆ.
ಸಮುದ್ರದಾಳದಲ್ಲಿ ಪತ್ತೆಯಾದ 400 ವರ್ಷದ ಹಡಗಲ್ಲಿ ಭಾರತದ ಸಾಂಬಾರ ಪದಾರ್ಥ!
ಬಹುತೇಕ ಮಂದಿಯನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!
ಮುಂಬೈ ಕಡಲ ಕಿನಾರೆ ಬಳಿಯ ಪ್ರಸ್ತಾವಿತ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕದ ಬಳಿ ಈ ಘಟನೆ ಸಂಭವಿಸಿದೆ. ಮಹಾರಾಷ್ಟ್ರ ಸರಕಾರದ ವತಿಯಿಂದ ಪತ್ರಕರ್ತರು, ರಾಜಕಾರಣಿಗಳನ್ನು ಆ ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು.