ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್; ಬಿಜೆಪಿ ನಾಯಕ

|
Google Oneindia Kannada News

ಮುಂಬೈ, ಜೂನ್ 24 : ಮಹಾರಾಷ್ಟ್ರದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಗೋಪಿಚಂದ್‌ ಪಡಾಲ್ಕರ್ ವಿವಾದ ಎಬ್ಬಿಸಿದ್ದಾರೆ. ಎನ್‌ಸಿಪಿಯ ಕಾರ್ಯಕರ್ತರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ಗೋಪಿಚಂದ್‌ ಪಡಾಲ್ಕರ್ ಕಾರ್ಯಕ್ರಮವೊಂದರಲ್ಲಿ, "ಎನ್‌ಸಿಪಿ ನಾಯಕ ಶರದ್ ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್ ಸೋಂಕು" ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಶರದ್ ಪವಾರ್ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ ಶರದ್ ಪವಾರ್ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ

Sharad Pawar Coronavirus For Maharastra Says BJP MLC

ಪಂಡಾರಾಪುರದಲ್ಲಿ ಕಾರ್ಯಕ್ರಮದಲ್ಲಿವೊಂದರಲ್ಲಿ ಪಾಲ್ಗೊಂಡಿದ್ದ ಗೋಪಿಚಂದ್‌ ಪಡಾಲ್ಕರ್ ಎನ್‌ಸಿಪಿ ನಾಯಕನ ವಿರುದ್ಧ ನೀಡಿದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗೋವಿಚಂದ್ ವಿರುದ್ಧ ಪ್ರತಿಭಟನೆ ನಡೆದಿದೆ.

ನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆ ನಿಜಾಮುದ್ದೀನ್ ಸಭೆಗೆ ಅನುಮತಿ ಯಾರು ನೀಡಿದ್ದರು?: ಶರದ್ ಪವಾರ್ ಪ್ರಶ್ನೆ

ಗೋಪಿಚಂದ್‌ ಪಡಾಲ್ಕರ್ ಹೇಳಿಕೆಗೆ ಶಿವಸೇನೆ ನಾಯಕಿ ಮನೀಷಾ ಕಯಾಂಡೆ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಗೋಪಿಚಂದ್‌ ಪಡಾಲ್ಕರ್ ಕೆಲವು ದಿನಗಳ ಹಿಂದೆ ಎಂಎಲ್‌ಸಿ ಆಗಿ ಆಯ್ಕೆಯಾಗಿದ್ದಾರೆ. ಪ್ರಚಾರಕ್ಕಾಗಿ ಮುಖ್ಯಮಂತ್ರಿ ಮತ್ತು ಶರದ್ ಪವಾರ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

"ಗೋಪಿಚಂದ್‌ ಪಡಾಲ್ಕರ್ ಹೇಳಿಕೆಗಳ ಮೂಲಕ ಪ್ರಸಿದ್ಧಿ ಪಡೆಯುವುದನ್ನು ಬಿಟ್ಟು. ವಿಧಾನ ಪರಿಷತ್ ಸದಸ್ಯರಾದವರ ಕಾರ್ಯಗಳ ಬಗ್ಗೆ ಗಮನ ಕೊಡಲಿ" ಎಂದು ಮನೀಷಾ ಕಯಾಂಡೆ ತಿರುಗೇಟು ಕೊಟ್ಟಿದ್ದಾರೆ.

English summary
Maharastra BJP leader and MLC Gopichand Padalkar made a controversial statement against NCP leader Sharad Pawar by saying Sharad Pawar coronavirus for Maharastra. NCP activists protest against comment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X