ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಮುಖಂಡ ಮಣಿಶಂಕರ್ ಅಯ್ಯರ್‌ಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದ ಉದ್ಧವ್ ಠಾಕ್ರೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 18: ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್‌ ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಣಿ ಶಂಕರ್ ಅಯ್ಯರ್ ಅವರು 2018 ರಲ್ಲಿ ಸಾವರ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ನೆನಪಿಸಿಕೊಂಡು, 'ಮಣಿಶಂಕರ್ ಅಯ್ಯರ್ ಕಾಣಿಸಿದರೆ ಆತನನ್ನು ಚಪ್ಪಲಿಯಲ್ಲಿ ಹೊಡೆಯಬೇಕು' ಎಂದು ಹೇಳಿದ್ದಾರೆ.

ಡಬ್ಬಾವಾಲಾ ರೆಯಾಂಶ್ ದೇಶ್ ಮುಖ್ ಬದುಕು ಬದಲಿಸಿದ ಆ ಒಂದು ಗಂಟೆ!ಡಬ್ಬಾವಾಲಾ ರೆಯಾಂಶ್ ದೇಶ್ ಮುಖ್ ಬದುಕು ಬದಲಿಸಿದ ಆ ಒಂದು ಗಂಟೆ!

ವೀರ್ ಸಾರ್ವಕರ್ ಅವರ ಜೀವನದ ಬಗ್ಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಎರಡು ದೇಶದ ವಿಷಯ (ಭಾರತ-ಪಾಕಿಸ್ತಾನ) ಮೊದಲು ಪ್ರಸ್ತಾಪಿಸಿದ್ದೇ ಸಾವರ್ಕರ್ ಎಂದು 2018 ರಲ್ಲಿ ಮಣಿಶಕರ್ ಅಯ್ಯರ್ ಹೇಳಿದ್ದರು.

Beat Mani Shankar Aiyar with Shoe: Uddhav Thackeray

'ನೆಹರು ಮತ್ತು ಮಹಾತ್ಮಾ ಗಾಂಧಿ ಅವರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ನಾವು ಪ್ರಶ್ನೆ ಮಾಡುತ್ತಿಲ್ಲ, ಆದರೆ ಸಾರ್ವಕರ್ ಪ್ರಧಾನಿ ಆಗಿದ್ದರೆ ಪಾಕಿಸ್ತಾನ ಉದಯವಾಗುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.

ಸೀಟು ಹಂಚಿಕೆ ವಿವಾದ, ಬಿಜೆಪಿ ಜೊತೆ ಮೈತ್ರಿಗೆ ಒಲ್ಲೆ ಎಂದ ಶಿವಸೇನೆ?ಸೀಟು ಹಂಚಿಕೆ ವಿವಾದ, ಬಿಜೆಪಿ ಜೊತೆ ಮೈತ್ರಿಗೆ ಒಲ್ಲೆ ಎಂದ ಶಿವಸೇನೆ?

'ವೀರ್ ಸಾವರ್ಕರ್ ಅವರ ಜೀವನದ ಬಗೆಗಿನ ಈ ಪುಸ್ತಕವನ್ನು ರಾಹುಲ್ ಗಾಂಧಿಗೆ ನೀಡಬೇಕು, ಪುಸ್ತಕ ಓದಲು ಅವರ ಬಳಿ ಈಗ ಸಾಕಷ್ಟು ಸಮಯ ಇದೆ ಎಂದ ಠಾಕ್ರೆ, ತೋಳು ಮೇಲೆಳೆದುಕೊಳ್ಳುವುದರಿಂದ ದೇಶದ ಪ್ರಧಾನಿ ಆಗಲು ಸಾಧ್ಯವಿಲ್ಲ, ದೇಶದ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದ ಫಡ್ನವಿಸ್ ಪತ್ನಿ!ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದ ಫಡ್ನವಿಸ್ ಪತ್ನಿ!

ವೀರ್ ಸಾವರ್ಕರ್‌ಗೆ ಭಾರತ ರತ್ನ ನೀಡಿ ಗೌವರವಿಸಬೇಕು ಎಂದು ಸಹ ಉದ್ಧವ ಠಾಕ್ರೆ ಈ ಸಮಯದಲ್ಲಿ ಒತ್ತಾಯಿಸಿದರು.

English summary
Shiva Sena chief Uddhav Thackeray today said that congress leader Mani Shankar Aiyar should be beaten with shoe for his comments on Veer Savarkar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X