ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಮಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವುದು, ಹೈದರಾಬಾದಿನಲ್ಲಲ್ಲ!'

|
Google Oneindia Kannada News

ಮುಂಬೈ, ಅಕ್ಟೋಬರ್ 20: "ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸುತ್ತೇವೆ. ಹೈದರಾಬಾದ, ಪಾಕಿಸ್ತಾನ ಅಥವಾ ಇರಾನಿನಲ್ಲಲ್ಲ" ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಅವರು ಅಯೋಧ್ಯೆಯ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾವತ್, 'ಓವೈಸಿ ಹೈದರಾಬಾದಿನ ಸಂಸದ. ಆದ್ದರಿಂದ ಹೈದರಾಬಾದಿಗಷ್ಟೇ ಸೀಮಿತವಾಗಿದ್ದರೆ ಸಾಕು. ರಾಮಮಂದಿರದ ವಿಷಯದಲ್ಲಿ ತಲೆಹಾಕುವ ಅಗತ್ಯವಿಲ್ಲ' ಎಂದರು.

ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನಿನ ಅಗತ್ಯವಿದೆ: ಭಾಗವತ್ ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನಿನ ಅಗತ್ಯವಿದೆ: ಭಾಗವತ್

'ರಾಮಮಂದಿರವನ್ನು ನಾವು ಕಟ್ಟುತ್ತಿರುವುದು ಅಯೋಧ್ಯೆಯಲ್ಲಿ. ಹೈದರಾಬಾದ್, ಪಾಕಿಸ್ತಾನ ಅಥವಾ ಇರಾನಿನಲ್ಲಲ್ಲ. ಆದ್ದರಿಂದ ಓವೈಸಿ ಅವರು ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿ ಮುಸ್ಲಿಮರ ಹಾದಿ ತಪ್ಪಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಓವೈಸಿ ಏನು ಹೇಳಿದ್ದರು?

ಓವೈಸಿ ಏನು ಹೇಳಿದ್ದರು?

ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಆಡಿದ್ದ ಮಾತನ್ನು ಉಲ್ಲೇಖಿಸಿ, ಅಸಾದುದ್ದಿನ್ ಓವೈಸಿ ಬಿಜೆಪಿ ಮತ್ತು ಆರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಮತ್ತು ಆರೆಸ್ಸೆಸ್ ಸರ್ವಾಧಿಕಾರಿಯಂತೇ ವರ್ತಿಸುತ್ತಿದೆ. ರಾಮಮಂದಿರ ನಿರ್ಮಿಸುವುದನ್ನು ಬೇಡ ಎಂದವರ್ಯಾರು? ರಾಮಮಂದಿರ ನಿರ್ಮಿಸದಂತೆ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ತಡೆಯುತ್ತಿರುವವರು ಯಾರು? ಎಂದು ಅವರು ಪ್ರಶ್ನಿಸಿದ್ದರು.

ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿಲ್ಲ: ತರೂರ್ಒಳ್ಳೆಯ ಹಿಂದುವಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿಲ್ಲ: ತರೂರ್

ಮೋಹನ್ ಭಾಗವತ್ ಭಾಷಣ

ಮೋಹನ್ ಭಾಗವತ್ ಭಾಷಣ

ಗುರುವಾರ ಆರೆಸ್ಸೆಸ್ ನ ವಿಜಯದಶಮಿ ಕಾರ್ಯಕ್ರಮದಂದು ಭಾಷಣ ಮಾಡಿದ್ದ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್, 'ರಾಮಮಂದಿರ ನಿರ್ಮಾಣಕ್ಕೆ ಒಂದು ಕಾನೂನು ರಚನೆಯಾಗುವ ಅಗತ್ಯವಿದೆ' ಎಂದಿದ್ದರು. ರಾಮಮಂದಿರ ನಿರ್ಮಾಣ ಭಾರತೀಯರ ಅಸ್ಮಿತೆಯ ಸಂಕೇತ ಎಂದಿದ್ದರು.

ರಾಮ ಮಂದಿರ ನಿರ್ಮಿಸದಿದ್ದರೆ, ಬಿಜೆಪಿ ನಿರ್ನಾಮ : ಶಿವಸೇನೆರಾಮ ಮಂದಿರ ನಿರ್ಮಿಸದಿದ್ದರೆ, ಬಿಜೆಪಿ ನಿರ್ನಾಮ : ಶಿವಸೇನೆ

ವಿಳಂಬ ಯಾಕೆ?

ವಿಳಂಬ ಯಾಕೆ?

ರಾಮಮಂದಿರ ನಿರ್ಮಾಣಕ್ಕೆ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ? ಮುಸ್ಲಿಮರ ವೋಟ್ ಬ್ಯಾಂಕ್ ಕೈತಪ್ಪಿಹೋದರೆ ಎಂಬ ಭಯವೇ? ನರೇಂದ್ರ ಮೋದಿ ಸರ್ಕಾರಕ್ಕೆ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಾಮರ್ಥ್ಯವಿದ್ದರೂ ಅದು ಮತ ಬ್ಯಾಂಕಿಗಾಗಿ ನಿರ್ಮಾಣಕ್ಕೆ ವಿಳಂಬ ಮಾಡುತ್ತಿದೆ ಎಂದು ರಾವತ್ ಹೇಳಿದರು.

ರಾಮ ಮಂದಿರ ನಿರ್ಮಿಸದಿದ್ದರೆ, ಬಿಜೆಪಿ ನಿರ್ನಾಮ

ರಾಮ ಮಂದಿರ ನಿರ್ಮಿಸದಿದ್ದರೆ, ಬಿಜೆಪಿ ನಿರ್ನಾಮ

ಅಕಸ್ಮಾತ್ ರಾಮಮಂದಿರ ನಿರ್ಮಾಣ ಮಾಡದೇ ಇದ್ದಲ್ಲಿ ಬಿಜೆಪಿ ನಿರ್ನಾಮವಾಗುವುದು ಖಂಡಿತ ಎಂದು ರಾವತ್ ಇತ್ತೀಚೆಗಷ್ಟೇ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆಯೊಂದಿಗೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಕೊಟ್ಟ ಮಾತಿಗೆ ತಪ್ಪಿದೆ. ಇದರಿಂದಾಗಿ ಪಕ್ಷ ನಿರ್ನಾಮವಾಗುವುದು ಖಂಡಿತ ಎಂದು ಅವರು ಹೇಳಿದರು.

English summary
Ram temple will be built in Ayodhya, not Hyderabad, Pakistan or Iran: Shiva Sena MP Sanjay Raut slams Asaduddin Owaisi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X