ಮುಂಬೈ ಡ್ರಗ್ ಕೇಸ್: ಸುಲಿಗೆ ಆರೋಪ ಮಾಡಿದ್ದ ಎನ್ಸಿಬಿ ಸಾಕ್ಷಿ ಪ್ರಭಾಕರ್ ಸೈಲ್ ಸಾವು
ಮುಂಬೈ ಏಪ್ರಿಲ್ 2: ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ)ನ ಸ್ವತಂತ್ರ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಶುಕ್ರವಾರ ಏಪ್ರಿಲ್ 1 ರಂದು ನಿಧನರಾಗಿದ್ದಾರೆ. ಅವರು ಶುಕ್ರವಾರ ಚೆಂಬೂರಿನ ಮಹುಲ್ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರನ್ನು ಪ್ರತಿನಿಧಿಸುತ್ತಿದ್ದ ಅವರ ವಕೀಲ ತುಷಾರ್ ಖಂಡಾರೆ ಹೇಳಿದ್ದಾರೆ.
ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಸಾಕ್ಷಿಗಳ ಪೈಕಿ ಪ್ರಭಾಕರ್ ಸೈಲ್ ಕೂಡ ಒಬ್ಬರು. ಪ್ರಕರಣದ ವಿಚಾರಣೆ ವೇಳೆ ಇವರ ಹೇಳಿಕೆಯನ್ನು ಪಡೆಯಲಾಗಿತ್ತು. ಇವರು ಪ್ರಕರಣದ ಮತ್ತೊಬ್ಬ ಸಾಕ್ಷಿ ಕಿರಣ್ ಗೋಸಾವಿಯ ಅಂಗರಕ್ಷಕನಾಗಿದ್ದಾರೆ. ಮುಂಬೈ ಕ್ರೂಸ್ ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಡ್ರಗ್ ಕೇಸ್ ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರ್ಯನ್ ಖಾನ್ ಅವರು ಕೆಲ ದಿನಗಳ ಕಾಲ ಜೈಲುವಾಸ ಕೂಡ ಅನುಭವಿಸಿ ನಂತರ ಜಾಮೀನನ ಮೇಲೆ ಹೊರಬಂದರು.
Mumbai | NCB's panch witness in Cordelia cruise drug case, Prabhakar Sail died yesterday. As per his lawyer Tushar Khandare, he died of a heart attack at his residence in Mahul area of Chembur yesterday.
— ANI (@ANI) April 2, 2022
(File pic of Prabhakar Sail) pic.twitter.com/CUplYNkuIh
ಆರ್ಯನ್ ಖಾನ್ ಜೈಲಿನಲ್ಲಿರುವಾಗ ಪ್ರಕರಣ ಕೈಬಿಡಲು ಎನ್ಸಿಬಿ ಅಧಿಕಾರಿಗಳಿಗೆ ಕಿರಣ್ ಗೋಸಾವಿಯ ವ್ಯವಹಾರ ಕುದುರಿಸಿದ್ದರು ಎಂದು ಪ್ರಭಾಕರ್ ದೊಡ್ಡ ಆರೋಪ ಮಾಡಿದ್ದರು. ತಮ್ಮ ಬಾಸ್ ಕಿರಣ್ ಗೋಸಾವಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಸಂಪರ್ಕಿಸಿದ್ದು ಇವರಿಬ್ಬರ ಮಧ್ಯೆ ಡ್ರಗ್ಸ್ ಪ್ರಕರಣದಿಂದ ಆರ್ಯನ್ ಖಾನ್ ನನ್ನು ಕೈಬಿಡಲು ಹಣ ಸುಲಿಗೆ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದರು. ಕಿರಣ್ ಗೋಸಾವಿ ಸಮೀರ್ ವಾಂಖೆಡೆಗೆ ಕರೆ ಮಾಡಿ ಸ್ಯಾಮ್ ಡಿಸೋಜಾಗೆ 38 ಲಕ್ಷ ಹಸ್ತಾಂತರಿಸಿದ್ದಕ್ಕೆ ನಾನೇ ಸಾಕ್ಷಿ ಎಂದು ಪ್ರಭಾಕರ್ ಸೈಲ್ ಹೇಳಿಕೊಂಡಿದ್ದರು. ಸ್ಥಳೀಯ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದ ಸೈಲ್, "ಗೋಸಾವಿ ಅವರು ಡಿಸೋಜಾಗೆ ಕರೆ ಮಾಡಿ 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಈ ವ್ಯವಹಾರ ರೂ.18 ಕೋಟಿಗೆ ಇತ್ಯರ್ಥಗೊಂಡಿತ್ತು. ಅದರಲ್ಲಿ ರೂ.8 ಕೋಟಿಯನ್ನು ಸಮೀರ್ ವಾಂಖೆಡೆಗೆ ಪಾವತಿಸಬೇಕು ಮತ್ತು ಉಳಿದವುಗಳನ್ನು ವಿಭಜಿಸಲಾಗುವುದು ಎಂದು ಡಿಸೋಜಾ ಹೇಳಿದ್ದರು" ಎಂದು ಹೇಳಿದ್ದರು. ಎನ್ಸಿಬಿ ವಿಶೇಷ ತನಿಖಾ ತಂಡದ (ಎಸ್ಐಟಿ) ದಾಖಲೆಗಳ ಪ್ರತಿಕೂಲವಾಗಿ ಸೈಲ್ ವರ್ತಿಸಿದ್ದರು.
Recommended Video
ಇವರ ಆರೋಪದ ಬೆನ್ನಲ್ಲೇ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿತ್ತು. ಆದರೆ ಪ್ರಭಾಕರ್ ಸೈಲ್ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಅವರ ಪರ ವಕೀಲರು ತಿಳಿಸಿದ್ದಾರೆ. ಸೈಲ್ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಅಂಧೇರಿಯಲ್ಲಿರುವ ಅವರ ಮನೆಗೆ ತಂದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.