ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ತಯಾರಿಗೆ ಕಾಂಗ್ರೆಸ್ ತಂಡ ರಚನೆ
ಮುಂಬೈ, ಆಗಸ್ಟ್ 22: ಮಹಾರಾಷ್ಟ್ರದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಂಡ ರಚಿಸಿದ್ದಾರೆ.
ಬಿಜೆಪಿಗೆ ಹೋಗುತ್ತಾರೆ ಎಂದು ಸುದ್ದಿ ಮಾಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕೈಯಲ್ಲಿ ಮಹಾರಾಷ್ಟ್ರದ ಜವಾಬ್ದಾರಿ ಕೊಟ್ಟಿದ್ದಾರೆ.
ಭಯ ಹುಟ್ಟಿಸಲು ಬಹುಮತವನ್ನು ರಾಜೀವ್ ಗಾಂಧಿ ಬಳಸಿರಲಿಲ್ಲ: ಸೋನಿಯಾ ಗಾಂಧಿ
ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸಮಿತಿಯ ಅಧ್ಯಕ್ಷ, ಹರೀಶ್ ಚೌಧರಿ, ಮಣಿಕ್ಕಮ್ ಠಾಕೂರ್ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಜನರಲ್ ಸೆಕ್ರೆಟರಿ ಇಂಚಾರ್ಜ್, ಬಾಲಾಸಾಹೇಬ್ ಥೋರಟ್ ಅವರನ್ನು ಪಿಸಿಸಿ ಅಧ್ಯಕ್ಷ, ಕೆಸಿ ಪದವಿಯಡವರನ್ನು ಸಿಎಲ್ಪಿ ಲೀಡರ್ ಆಗಿ ನೇಮಿಸಲಾಗಿದೆ.
ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಚುನಾವಣೆಯ ಜವಾಬ್ದಾರಿಯನ್ನು ನೀಡಲಾಗಿತ್ತು ಆದರೆ ಕಾಂಗ್ರೆಸ್ ಸೋಲನನ್ನುಭವಿಸಿತ್ತು.
ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷೆ: ಆಯ್ಕೆಗೆ ಕಾರಣವೇನು?
ಅದಾದ ಬಳಿಕ ಜುಲೈನಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಐಸಿಸಿ ಅಧ್ಯಕ್ಷರ ಸ್ಥಾನಕ್ಕೂ ಸಿಂಧಿಯಾ ಅವರ ಹೆಸರು ಕೇಳಿಬಂದಿತ್ತು.