ಕಾಡಿದ ಅನಾರೋಗ್ಯ, ರಾಷ್ಟ್ರಗೀತೆ ಮೊಳಗುವಾಗಲೇ ಕುಳಿತುಬಿಟ್ಟ ಗಡ್ಕರಿ
ಮುಂಬೈ, ಜುಲೈ 01: ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕುಸಿದು ಕುಳಿತ ಘಟನೆ ಮಹಾರಾಷ್ಟ್ರದ ಸೊಲಾಪುರದಲ್ಲಿ ನಡೆದಿದೆ.
ಗುರುವಾರ ಸೊಲಾಪುರದ ಪುಣ್ಯಶ್ಲೋಕ್ ಅಹಲ್ಯಾದೇವಿ ಹೊಳ್ಕರ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೂಂದರಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಮುಖ್ಯಅತಿಥಿಯಾಗಿದ್ದ ಗಡ್ಕರಿ ಅವರು ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದ ಸಂದರ್ಭದಲ್ಲಿ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.
ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?
ಆದರೆ ರಾಷ್ಟ್ರಗೀತೆಯ ನಡುವಲ್ಲೇ ನಿತಿನ್ ಗಡ್ಕರಿ ಅವರು ನಿಲ್ಲಲಾಗದೆ, ಕುಸಿದು ಕುಳಿತರು. ಇದರಿಂದಾಗಿ ಕೆಲಕಾಲ ಕಾರ್ಯಕ್ರಮದಲ್ಲಿ ಆತಕ ಮನೆ ಮಾಡಿತ್ತು. ಅನಾರೋಗ್ಯದ ಕಾರಣ ಹೀಗಾಗಿದೆ. ಭಯ ಪಡುವಂಥದ್ದು ಏನೂ ಇಲ್ಲ ಎಂದು ನಂತರ ಅವರ ಆಪ್ತರು ತಿಳಿಸಿದರು.
ಇತ್ತೀಚೆಗಷ್ಟೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದ ಕಾರಣ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ನಿತಿನ್ ಗಡ್ಕರಿ ಅವರು ಕುಸಿದು ಬಿದ್ದ ಘಟನೆ ನಡೆದಿತ್ತು. ಇದೀಗ ಅದು ಪುನರಾವರ್ತನೆಯಾಗಿದೆ.