ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇಮ ವೈಫಲ್ಯದಿಂದ ಸಾಯಲು ಹೋದ ಯುವಕನಿಗೆ ಕೊನೆ ಕ್ಷಣದಲ್ಲಿ ಜ್ಞಾನೋದಯ!

|
Google Oneindia Kannada News

ಮಂಗಳೂರು, ಮಾರ್ಚ್ 07: ಪ್ರೇಮ ವೈಫಲ್ಯದಿಂದ ಹತಾಶನಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ. ಆದರೆ ಆತನಿಗೆ ಕೊನೆ ಕ್ಷಣದಲ್ಲಿ ಜ್ಞಾನೋದಯವಾಗಿ ಈಜಾಡಿ ದಡ ಸೇರಿದ ಪ್ರಸಂಗ ಮಂಗಳೂರಿನಲ್ಲಿ ನಿನ್ನೆ ಸಂಜೆ ಬುಧವಾರ (ಮಾ.06) ನಡೆದಿದೆ.

ಮಗು ನೋಡಿಕೊಳ್ಳಬೇಕೆಂದರೂ ಪಾಳಿ ಬದಲು, ಬಿಎಂಟಿಸಿ ನಿರ್ವಾಹಕಿ ಆತ್ಮಹತ್ಯೆಗೆ ಯತ್ನಮಗು ನೋಡಿಕೊಳ್ಳಬೇಕೆಂದರೂ ಪಾಳಿ ಬದಲು, ಬಿಎಂಟಿಸಿ ನಿರ್ವಾಹಕಿ ಆತ್ಮಹತ್ಯೆಗೆ ಯತ್ನ

ಸಾವಿನ ಕದ ತಟ್ಟುತ್ತಿರುವಾಗ ಜ್ಞಾನೋದಯಗೊಂಡ ಯುವಕನನ್ನು ನೌಫಲ್ ಎಂದು ಗುರುತಿಸಲಾಗಿದೆ. ಪ್ರೇಮ ವೈಫಲ್ಯದಿಂದ ಮನನೊಂದ ಮಂಜೇಶ್ವರದ ತೂಮಿನಾಡು ನಿವಾಸಿ ನೌಫಲ್ ನಿನ್ನೆ ಸಂಜೆ ನೇತ್ರಾವತಿ ನದಿಗೆ ಹಾರಿದ್ದ.

 ಪತಿ ಸಾವಿನಿಂದ ನೊಂದು 26ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ವೃದ್ಧೆ ಪತಿ ಸಾವಿನಿಂದ ನೊಂದು 26ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ವೃದ್ಧೆ

Young man attempted to suicide but at last minuit changed mind

ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾರಿದ್ದ ನೌಫಲ್ ನೀರಿನಿಂದ ಮೇಲಕ್ಕೆ ಬಂದ ತಕ್ಷಣ ಈಜಿ ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಪಿಲ್ಲರ್ ನ ಸ್ಲ್ಯಾಬ್ ಮೇಲೆ ಕುಳಿತಿದ್ದಾನೆ.

Young man attempted to suicide but at last minuit changed mind

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೌಫಲ್ ನನ್ನು ಮೇಲ್ಗಡೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ. ಆದರೆ ಕೊನೆ ಕ್ಷಣದಲ್ಲಿ ಸಾಯಲು ಮನಸ್ಸಾಗಲಿಲ್ಲ. ಬದುಕಿ ತೋರಿಸಬೇಕು ಅಂತ ಅನಿಸಿತು ಎಂದು ಹೇಳಿಕೆ ನೀಡಿದ್ದಾನೆ.

English summary
Naufal (23) resident of Manjewara jumped in to Nettravathi river on march 07. Because he attempted to suicide but at last minuit changed mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X