ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ವಿದ್ಯಾರ್ಥಿನಿ ಅಂಜನಾಳನ್ನ ಕೊಲೆ ಮಾಡಿದ್ದೇಕೆ?

|
Google Oneindia Kannada News

ಮಂಗಳೂರು ಜೂನ್ 10: ಮಂಗಳೂರಿನ ಅತ್ತಾವರದ ಬಾಡಿಗೆ ಮನೆಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಕೊಲೆ ರಹಸ್ಯ ಬಯಲಾಗಿದೆ. ಅಂಜನಾ ಕೊಲೆಗೆ ಆಕೆ ಗೆಳೆಯನೊಂದಿಗೆ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕೊಲೆ ಆರೋಪಿ ವಿಜಯಪುರ ಸಿಂಧಗಿ ತಾಲೂಕಿನ ಬೆನಕೊಟಗಿ ಥಾಂಡಾ ನಿವಾಸಿ ಸಂದೀಪ್ ರಾಥೋಡ್ ಎಂಬಾತನನ್ನು ಅಂಜನಾ ವಸಿಷ್ಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಂಧಗಿಯಲ್ಲಿ ಬಂಧಿಸಿದ್ದರು. ಕೊಲೆ ಕೃತ್ಯ ನಡೆಸಿದ ಬಳಿಕ ನೇರವಾಗಿ ಬಸ್ ಹತ್ತಿ ಊರಿಗೆ ತೆರಳಿದ್ದ ಆತ ಸಿಂಧಗಿಯ ಲಾಡ್ಜ್ನಲ್ಲಿ ರೂಂ ಮಾಡಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.

 ಮಂಗಳೂರು: ವಿದ್ಯಾರ್ಥಿನಿ ಅಂಜನಾ ವಸಿಷ್ಠ ಕೊಲೆ ಆರೋಪಿ ಬಂಧನ ಮಂಗಳೂರು: ವಿದ್ಯಾರ್ಥಿನಿ ಅಂಜನಾ ವಸಿಷ್ಠ ಕೊಲೆ ಆರೋಪಿ ಬಂಧನ

ಸಂದೀಪ್ ರಾಥೋಡ್ ಹಾಗೂ ಅಂಜನಾ ವಸಿಷ್ಠ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂಜನಾ ವಸಿಷ್ಠ ಅವರ ಪೋಷಕರು ಆಕೆಯನ್ನು ಪ್ರತಿಷ್ಠಿತ ಕುಟುಂಬಕ್ಕೆ ವಿವಾಹ ಮಾಡಿಕೊಡಬೇಕು ಎಂದು ಆಸೆಪಟ್ಟಿದ್ದರು. ಉತ್ತಮ ಸಂಬಂಧವೂ ಕೂಡಿ ಬಂದಿತ್ತು. ಆಕೆಯೂ ವಿವಾಹಕ್ಕೆ ಸಮ್ಮತಿ ನೀಡಿದ್ದಳು. ಈ ವಿಷಯವನ್ನು ರಾಥೋಡ್ ಜತೆ ಹೇಳಿದಾಗ ಆತ ಕೋಪಗೊಂಡಿದ್ದ ಎಂದು ಹೇಳಲಾಗಿದೆ.

what is the motive behind Anjana Vasist murder

ಉಜಿರೆಯಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ ಅಂಜನಾ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಾಗಿ ತರಬೇತಿ ಪಡೆಯಲು ಶುಕ್ರವಾರ ಬೆಳಿಗ್ಗೆ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದರು. ಆ ಬಳಿಕ ಅತ್ತಾವರದಲ್ಲಿರುವ ಗೆಳೆಯ ಸಂದೀಪ್ ರಾಥೋಡ್ ಎಂಬಾತನ ಬಾಡಿಗೆ ಕೊಠಡಿಗೆ ಹೋಗಿದ್ದು, ಅಲ್ಲಿ ಆಕೆಯನ್ನು ವೈರ್ ನಿಂದ ಬಿಗಿದು ಕೊಲೆ ಮಾಡಲಾಗಿತ್ತು. ಕೊಲೆಯಾದ ಬಳಿಕ ಆರೋಪಿ ರಾಥೋಡ್ ಸ್ಥಳದಿಂದ ಪರಾರಿಯಾಗಿದ್ದ.

English summary
Mangaluru police arrested PG student Anjana Vasist murder accused. arrested accused identified as Sandeep Rathod in Sindgi taluk Vijayapura district. Here is the details regarding the motive behind Anjana Vasist murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X