65ಕಿಮೀ ರಸ್ತೆ : ಪಶ್ಚಿಮ ಘಟ್ಟದ 30,000 ಮರಗಳಿಗೆ ಕುತ್ತು?
ಮಂಗಳೂರು ಡಿಸೆಂಬರ್ 10: ಚಿಕ್ಕಮಗಳೂರಿನ ಬೈರಾಪುರ ಹಾಗೂ ದ.ಕ ಜಿಲ್ಲೆಯ ಶಿಶಿಲವನ್ನು ಸಂಪರ್ಕಿಸುವ 65ಕಿಮೀ ರಸ್ತೆಯನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಈ ರಸ್ತೆ ನಿರ್ಮಾಣ ಶೀಘ್ರದಲ್ಲೇ ಶುರುವಾಗಲಿದ್ದು ಇದರ ಪರಿಣಾಮವಾಗಿ ಪಶ್ಚಿಮ ಘಟ್ಟದ ಸುಮಾರು 30000 ಮರಗಳನ್ನು ಕಡಿಯಬೇಕಾಗಿದೆ. ಸ್ಥಳೀಯರು 2010ರಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರಕಾರವೇ ಖುದ್ದಾಗಿ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಸ್ಥಳೀಯರ ಪ್ರಕಾರ, ಈ ಪ್ರದೇಶವನ್ನು ಹೆಚ್ಚಾಗಿ ಹಲವಾರು ವರ್ಷಗಳಿಂದ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು. ಆದರೆ 2010ರಲ್ಲಿ ಸರಕಾರವು ಈ ಯೋಜನೆಗೆ ಚಾಲನೆ ನೀಡಿ ಸುಮಾರು 4ಕಿಮೀ ವ್ಯಾಪ್ತಿಯಲ್ಲಿ ಮರಗಳನ್ನು ಕಡಿದಿತ್ತು. ಇದನ್ನು ತಿಳಿದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸರಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು.[ಕೊಡಗಿನ ಕಂಪು ಸೂಸುವ ಶ್ರೀಗಂಧದ ಸಾವಿನ ಕಥೆ!]
ಆದರೆ ಆರು ವರ್ಷಗಳ ನಂತರ ಸರ್ಕಾರ ಪುನಃ ಈ ಯೋಜನೆಗೆ ಚಾಲನೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂಬುದು ಸ್ಥಳೀಯರ ಅಭಿಪ್ರಾಯ. ಸರ್ಕಾರದ ಪ್ರಕಾರ ಈ ರಸ್ತೆ ನಿರ್ಮಾಣ ಮಾಡುವುದರಿಂದ ಎರಡು ಪ್ರದೇಶಗಳ ಅಂತರವನ್ನು ಕಡಿಮೆ ಮಾಡಿ ಸಂಪರ್ಕ ಸುಗಮವಾಗಲಿದೆ . ಮಾತ್ರವಲ್ಲದೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಿಂದ 15ಕಿಮೀ ಮತ್ತು ಮೂಡಿಗೆರೆ ಮತ್ತು ಉಜಿರೆಯಿಂದ 29ಕಿಮಿ ಪ್ರಯಾಣದ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ.
ಸರ್ಕಾರ ಈ ರಸ್ತೆ ನಿರ್ಮಾಣ ಮಾಡುವುದರಿಂದ ಶಿರಾಡಿ ಮತ್ತು ಚಾರ್ಮಾಡಿ ಘಾಟ್ ಹೆದ್ದಾರಿಗೆ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.[ಹಾಸನ- ಮಾರನಹಳ್ಳಿ ರಸ್ತೆ ವಿಸ್ತರಣೆಗೆ 3 ಸಾವಿರ ಮರಕ್ಕೆ ಕೊಡಲಿ]
ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಸಚಿವ ಹೆಚ್. ಸಿ. ಮಹಾದೇವಪ್ಪ, ಪ್ರಸ್ತುತವಾಗಿ ಈ ಯೋಜನೆಯ ವೆಚ್ಚ ಸುಮಾರು ರು 56ಕೋಟಿ ಎಂದು ಅಂದಾಜಿಸಲಾಗಿದೆ. ಈ ರಸ್ತೆ ಯೋಜನೆಯನ್ನು ಕಾರ್ಯಗತಗೊಳಿಸಲು ಈಗಾಗಲೇ ಸಮೀಕ್ಷೆ ನಡೆಯುತ್ತಿದೆ ಎಂದರು.[ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]
ಈಗಾಗಲೇ ಸರ್ಕಾರವು ಯೋಜನೆಯ ಜವಾಬ್ದಾರಿಯನ್ನು ಹಾಗೂ ಯೋಜನೆಯ ಕುರಿತು ಸಂಕ್ಷಿಪ್ತ ವರದಿ ನೀಡುವಂತೆ ಬೆಂಗಳೂರು ಮೂಲದ ಪ್ರೀತಿ ಸಿಎಡಿ ಕನ್ಸಲ್ಟಿಂಗ್ ಎಂಜಿನಿಯರ್ಸ್ ತಿಳಿಸಿದ್ದು, ಪ್ರಸ್ತುತವಾಗಿ ಈ ಸಂಸ್ಥೆಯು ಯೋಜನೆಯ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಯೋಜನೆ ಪ್ರಗತಿಯಲ್ಲಿದೆ ಎಂದು ಈ ಎಂಜಿನಿಯರ್ಸ್ ತಿಳಿಸಿದ್ದಾರೆ.[800 ಮರ ಕತ್ತರಿಸಿದರೆ 81 ಸಾವಿರ ಗಿಡ ನೆಡುತ್ತೇವೆ : ಜಾರ್ಜ್]
ಆದರೆ ಪರಿಸರ ತಜ್ಞರು ಈ ಯೋಜನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಹೌದು ಈ ಯೋಜನೆಯನ್ನು ಕೈಗೊಳ್ಳುವುದರಿಂದ ಆಗುವ ಅನನುಕೂಲದ ಬಗ್ಗೆ ತಿಳಿಸಿದ ಪರಿಸರ ತಜ್ಞರು, ಈ ಯೋಜನೆಯ ಪ್ರಕಾರ ನಿರ್ಮಾಣ ಮಾಡಲಿರುವ ರಸ್ತೆ ಸುಮಾರು 24 ಕಿಮೀ ನಷ್ಟು ಪಶ್ಚಿಮಘಟ್ಟ ಮತ್ತು ದಟ್ಟ ಕಾಡುಗಳನ್ನು ಹಾದುಹೋಗುತ್ತದೆ. ಈ ಕಾರಣದಿಂದ ಸುಮಾರು 50000 ಸಾವಿರ ಮರಗಳನ್ನು ಕಡಿಯಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಿದ್ದಾರೆ.