ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಂತಿ ಬಾಳಿಗ ಮೃತದೇಹದ ಎದುರು ಪ್ರತಿಜ್ಞೆ

|
Google Oneindia Kannada News

ಮಂಗಳೂರು, ಜನವರಿ 9 : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಜಯಂತಿ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಜನರು ವಿನಾಯಕ ಬಾಳಿಗಾ ಕೊಲೆಗಾರರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಜಯಂತಿ ಬಾಳಿಗಾರ ಮೃತದೇಹದ ಎದುರೇ ಪ್ರತಿಜ್ಞೆ ಮಾಡಿದರು.

ಜಯಂತಿ ಬಾಳಿಗ (81) ಅವರ ಅಂತ್ಯ ಸಂಸ್ಕಾರ ಸೋಮವಾರ ಬೆಳಗ್ಗೆ ಬೋಳೂರಿನ ಚಿತಾಗಾರದಲ್ಲಿ ನೆರವೇರಿತು. ಅಲ್ಲದೇ ಇದೇ ವೇಳೆ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಮಗನ ಕೊಲೆಯ ಕೊರಗಿನಲ್ಲೇ ಜಯಂತಿ ಬಾಳಿಗಾ ಮೃತಪಟ್ಟಿದ್ದಾರೆ. ಅವರು ಕಣ್ಣುಗಳನ್ನು ದಾನ ಮಾಡಲಾಗಿದೆ.[ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ]

Vinayak Baliga's mother Jayanti Baliga donate eyes after her death

ಅವರ ಕಣ್ಣಾದರೂ ಮಗನ ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗುವುದನ್ನು ನೋಡಲಿ. ವಿನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.

ಶನಿವಾರದಂದು ಜಯಂತಿ ಅವರು ಅಸೌಖ್ಯದಿಂದ ಕುಸಿದು ಬಿದ್ದು ತಲೆಗೆ ಗಂಭೀರ ಏಟು ಬಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ತಮ್ಮ ಕೊನೆ ಉಸಿರೆಳೆದಿದ್ದರು.

English summary
Slain RTI activist's Vinayak Baliga's mother Jayanti Baliga (81) donated her eyes after her death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X