ಮತ್ತೆ ಪಿಪಿಇ ಕಿಟ್ ಧರಿಸದೇ ಸೋಂಕಿತೆಯ ಅಂತಿಮ ದರ್ಶನ ಪಡೆದ ಯುಟಿ ಖಾದರ್
ಮಂಗಳೂರು, ಜುಲೈ 28: ಈ ಮುನ್ನ ಪಿಪಿಇ ಕಿಟ್ ಧರಿಸದೇ ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ವಿವಾದಕ್ಕೆ ಸಿಲುಕಿದ್ದ ಶಾಸಕ ಯು.ಟಿ.ಖಾದರ್ ಇದೀಗ ಮತ್ತೆ ಅದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.
Recommended Video
ಮತ್ತೆ ಪಿಪಿಇ ಕಿಟ್ ಧರಿಸದೇ, ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತಿಮ ದರ್ಶನ ಪಡೆದಿದ್ದಾರೆ. ಸೂಕ್ತ ಸುರಕ್ಷತಾ ಕ್ರಮವನ್ನು ಅನುಸರಿಸದೇ ಅಂತಿಮ ದರ್ಶನ ಪಡೆದ ಮಾಜಿ ಆರೋಗ್ಯ ಸಚಿವ ಖಾದರ್ ವಿರುದ್ಧ ಟೀಕೆಗಳು ಕೇಳಿಬಂದಿವೆ.
ಪಿಪಿಇ ಕಿಟ್ ಧರಿಸದೇ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗಿ; ಯುಟಿ ಖಾದರ್ ಬಗ್ಗೆ ವಿರೋಧ
ಜುಲೈ 24 ರಂದು ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಅವರು ಖಾದರ್ ಅವರ ಸ್ನೇಹಿತರ ತಾಯಿಯಾಗಿದ್ದು, ಅವರ ಅಂತಿಮ ದರ್ಶನಕ್ಕೆ ತೆರಳಿದ್ದಾರೆ. ಮಂಗಳೂರು ನಗರದ ಮಂಗಳಾದೇವಿ ಸಮೀಪದ ಬೋಳಾರ ರುದ್ರಭೂಮಿ ಬಳಿ ಅಂತ್ಯ ಸಂಸ್ಕಾರಕ್ಕೂ ಮುನ್ನ ಪಾರ್ಥಿವ ಶರೀರದ ಮುಖ ಪರದೆ ಸರಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಮಾಜಿ ಎಂಎಲ್ ಸಿ ಐವನ್ ಡಿಸೋಜಾ, ಕಾಂಗ್ರೆಸ್ ಜಿಲ್ಲಾ ನಾಯಕರೂ ಭಾಗಿಯಾಗಿದ್ದರು.
ಆರೋಗ್ಯ ಕಾರ್ಯಕರ್ತರೇ ಪಿಪಿಇ ಕಿಟ್ ಇಲ್ಲದೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ, ಟೀಕೆಗಳು ಕೇಳಿಬಂದಿವೆ.