ಪಾಲಡ್ಕದಲ್ಲಿ ಬಾವಿಯೊಂದರ ಜಲಮಟ್ಟ ಹಠಾತ್ ಏರಿಕೆ, ಕಾರಣ ಮಾತ್ರ ನಿಗೂಢ!
ಮಂಗಳೂರು, ಫೆಬ್ರವರಿ 22: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಬೇಸಿಗೆ ಸಮೀಪಿಸುತ್ತಿದಂತೆ ಝಳಕ್ಕೆ ಕೆರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನಡುವೆ ಬಾವಿಯಲ್ಲಿ ನೀರಿನ ಮಟ್ಟ ದಿಢೀರನೆ ಹೆಚ್ಚಾದರೆ ? ಇಂತಹದೊಂದು ಅಚ್ಚರಿಯ ಬೆಳವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪ ನಡೆದಿದೆ.
ಇಲ್ಲಿಯ ಪಾಲಡ್ಕ ಎಂಬಲ್ಲಿನ ನಿವಾಸಿಯೊಬ್ಬರ ಮನೆಯ ಬಾವಿಯಲ್ಲಿ 3 ಅಡಿಗಳಷ್ಟಿದ್ದ ನೀರಿನ ಮಟ್ಟ ಒಮ್ಮಿಂದೊಮ್ಮೆ ಹಠಾತ್ 19 ಅಡಿಗೇರಿದೆ.
ಅವಳಿ ದೈವಗಳ ಪವಾಡ:ಪಾಪೆಮಜಲು ಕೋಟಿ-ಚೆನ್ನಯ ಗರಡಿ ಬಳಿ ಚಿಮ್ಮಿದ ನೀರು!
ಪಾಲಡ್ಕದ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಪಾಲಡ್ಕ ಚರ್ಚ್ ಸಮೀಪ ಇರುವ ಸತೂರ್ನಿ-ವೀಣಾ ಡಿ'ಸಿಲ್ವಾ ಅವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಸಂಗತಿ ಬೆಳಕಿಗೆ ಬಂದಿದೆ. ಸತೂರ್ನಿ ವೀಣಾ ಡಿ'ಸಿಲ್ವಾ ದಂಪತಿ ಕೆಲವು ವರ್ಷಗಳ ಹಿಂದೆ ಈ ಜಾಗ ಖರೀದಿಸಿ ತಮಗೊಂದು ಪಟ್ಟ ಮನೆ ನಿರ್ಮಿಸಿದ್ದರು.
ಮನೆಯ ಕಾಂಪೌಂಡ್ ನಲ್ಲಿ 40 ಅಡಿ ಆಳದ ತೆರೆದ ಬಾವಿಯನ್ನು ತೋಡಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ನೀರಿನ ಮಟ್ಟ 3 ರಿಂಗ್ಗಳಿಗಷ್ಟೇ ಸೀಮಿತವಾಗಿತ್ತು. ಸತೂರ್ನಿ ಇತ್ತೀಚೆಗೆ ಬಾವಿಯಲ್ಲಿ ನೀರಿನ ಮಟ್ಟ ಪರೀಕ್ಷಿಸಿದಾಗ ಅಷ್ಟೇ ಇತ್ತು.
ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ?
ಈ ನಡುವೆ ಪಾಲಡ್ಕ ಪ್ರದೇಶದ ಸುತ್ತಮುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಆದರೆ ಇದೊಂದು ಬಾವಿಯಲ್ಲಿ ಮಾತ್ರ ನೀರು ಏಕಾಏಕಿ ಏರಿಕೆಯಾಗಿದೆ. ಈ ಸಂಗತಿ ಅಚ್ಚರಿಗೆ ಕಾರಣವಾಗಿದ್ದು, ಜನರ ಆಕರ್ಷಣೆಯ ಕೆಂದ್ರವಾಗಿದೆ.
ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ
ಈ ಬಾವಿಯಿಂದ ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿ ಪಾಲಡ್ಕ ಚರ್ಚ್ನ ಧರ್ಮಗುರುಗಳು ಹಾಗೂ ಊರವರ ಮುತುವರ್ಜಿಯ ಫಲವಾಗಿ ಜನಪ್ರತಿನಿಧಿಗಳ ಪ್ರಯತ್ನ ದಿಂದ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿತ್ತು.
ಬಾವಿಯಲ್ಲಿ ನೀರಿ ಮಟ್ಟ ಏಕಾಏಕಿ ಏರಿಕೆಯಾಗಲು ತುಸು ದೂರದಲ್ಲಿ ನಿರ್ಮಾಣವಾಗಿರುವ ಈ ಕಿಂಡಿ ಅಣೆಕಟ್ಟು ಕಾರಣ ಎನ್ನಲಾಗಿದೆ. ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿಯಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಈ ಭಾಗದ ಇತರ ಬಾವಿಗಳಲ್ಲಿ ಏಕೆ ನೀರಿನ ಮಟ್ಟ ಏರಿಕೆಯಾಗಿಲ್ಲ ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.