ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ಮಹಾಯುದ್ಧದಲ್ಲಿ ಹೋರಾಡಿದ್ದ ಸುಬೇದಾರ್ ರುಕ್ಮಯ್ಯ ಬಂಗೇರಾ ನಿಧನ

|
Google Oneindia Kannada News

ಮಂಗಳೂರು, ಜನವರಿ 13: ಹಲವಾರು ಕರಾಳ ಘೋರ ದುರಂತಗಳಿಗೆ ಸಾಕ್ಷಿಯಾಗಿದ್ದ 2 ನೇ ಮಹಾಯುದ್ಧದಲ್ಲಿ ಭಾಗಿಯಾಗಿ ನಂತರ ನಿವೃತ್ತರಾಗಿದ್ದ ಸುಬೇದಾರ್ ಜಪ್ಪು ಬಪ್ಪಾಲ್ ನಿವಾಸಿ ರುಕ್ಮಯ್ಯ ಬಂಗೇರಾ ಅವರು ಎಡಪದವಿನ ಪುತ್ರನ ಮನೆಯಲ್ಲಿ ಶನಿವಾರ ನಿಧನರಾದರು. ಅವರಿಗೆ (98) ವರ್ಷ ವಯಸ್ಸಾಗಿತ್ತು.

ಸೇನೆಯಲ್ಲಿ ಮುಖ್ಯ ಸುಬೇದಾರ್ ದರ್ಜೆಯ ಅಧಿಕಾರಿಯಾಗಿದ್ದ ರುಕ್ಮಯ್ಯ ಬಂಗೇರಾ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಸೇನೆಯಲ್ಲಿ 37ವರ್ಷ ಸೇವೆ ಸಲ್ಲಿಸಿದ ಇವರು, ದ್ವಿತೀಯ ಮಹಾಯುದ್ಧ ಮಾತ್ರವಲ್ಲದೆ, ಹೈದ್ರಾಬಾದ್ ಮತ್ತು ಗೋವಾ ವಿಮೋಚನೆಯಲ್ಲಿ ಭಾಗವಹಿಸಿದ್ದರು.

ತುಳುಭಾಷೆ, ಸಂಸ್ಕೃತಿಯ ಸಂಶೋಧಕ ಪ್ರೊ.ಪೀಟರ್ ಜೆ ಕ್ಲಾಸ್ ಇನ್ನಿಲ್ಲತುಳುಭಾಷೆ, ಸಂಸ್ಕೃತಿಯ ಸಂಶೋಧಕ ಪ್ರೊ.ಪೀಟರ್ ಜೆ ಕ್ಲಾಸ್ ಇನ್ನಿಲ್ಲ

ರುಕ್ಮಯ್ಯ ಬಂಗೇರಾ ಅವರ ಸೇವೆಯನ್ನು ಗುರುತಿಸಿದ್ದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್‌ ಚಹಾಕೂಟಕ್ಕೆ ತಮ್ಮ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ, ಗೌರವಿಸಿದ್ದರು.

Subedar Rukmaya Bangera (98) no more

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಜಿಪಂ ಸದಸ್ಯರಾದ ಜನಾರ್ದನ ಗೌಡ, ಯು.ಪಿ. ಇಬ್ರಾಹೀಂ, ತಾ ಪಂ ಸದಸ್ಯರಾದ ಸಚಿನ್ ಅಡಪ, ನಾಗೇಶ್ ಶೆಟ್ಟಿ, ಅಪ್ಸತ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮೃತರ ಮನೆಗೆ ತೆರಳಿ ರುಕ್ಮಯ್ಯ ಬಂಗೇರಾ ಅವರ ಅಂತಿಮ ದರ್ಶನ ಪಡೆದರು.

English summary
Subedar Rukmaya Bangera (98) one who fought in 2 world war died yesterday in his son's house at Yedapadavu near Managluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X