ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೃತ ಯೋಧನ ಕುಟುಂಬಕ್ಕೆ ಆರ್ಥಿಕ ನೆರವು: ಮುಖ್ಯಮಂತ್ರಿಗೆ ಸಚಿವರ ಮನವಿ

|
Google Oneindia Kannada News

ಮಂಗಳೂರು, ಮಾರ್ಚ್ 8: ಕಳೆದ ವರ್ಷ ಜುಲೈನಲ್ಲಿ ಸೇವೆಯಲ್ಲಿದ್ದಾಗಲೇ ಮೃತಪಟ್ಟ ವಾಯುಸೇನೆಯ ಯೋಧ, ಬೆಳ್ತಂಗಡಿ ತಾಲೂಕಿನ ಏಕನಾಥ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ಮಂಜೂರು ಮಾಡುವಂತೆ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಚೆನ್ನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್ ಗೆ ವಾಯಸೇನೆಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕಳೆದ ವರ್ಷ ಜುಲೈ 22ರಂದು ವಿಮಾನವು ನಿಗೂಢವಾಗಿ ಕಾಣೆಯಾಗಿತ್ತು.ಬಳಿಕ ಯೋಧರು ಬದುಕುಳಿಯುವ ಸಾಧ್ಯತೆ ಇಲ್ಲದ್ದರಿಂದ ವಾಯುಸೇನೆಯು ಏಕನಾಥ್ ಹಾಗೂ ಇತರ ಯೋಧರ ಮರಣ ಪ್ರಮಾಣ ಪತ್ರ ನೀಡಿದೆ.['ನನಗೆ ಕಿರುಕುಳ ನೀಡುತ್ತಿದ್ದಾರೆ' ತೇಜ್ ಬಹದ್ದೂರ್ ಮತ್ತೊಂದು ವಿಡಿಯೋ]

State Forest Minister requests financial help to a martyr's family in mangaluru

ಯೋಧನ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಯ ನೆಲೆಯಲ್ಲಿ ಏಕನಾಥರ ಪತ್ನಿ ಜಯಂತಿ ಅವರಿಗೆ ನೆರವು ನೀಡಬೇಕೆಂದು ಸಚಿವರು ಏಕನಾಥರ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

English summary
State Forest Minister B. Ramanatha Rai has requested CM Siddaramaiah to help a soldiers family in Mangaluru. The soldier died in a plane crash on 22nd July, 2016. His family is facing financial problem now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X